ಕೇಂದ್ರ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ: ಕರ್ನಾಟಕಕ್ಕೆ ಇದೆ ಒಂದು ಚಾನ್ಸ್?
ರಾಜ್ಯ ಮಾತ್ರವಲ್ಲ ಕೇಂದ್ರದಲ್ಲೂ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ ಇದ್ದು, ಬಜೆಟ್ಗೂ ಮುನ್ನಾ ಕೇಂದ್ರ ಸಂಪುಟ ವಿಸ್ತರಣೆ ಪುನರ್ ರಚನೆ ಆಗಬಹುದು.
ಪ್ರಧಾನಿ ನರೇಂದ್ರ ಮೋದಿ ಕ್ಯಾಬಿನೆಟ್ನಲ್ಲಿ ಹೊಸ ಮುಖಗಳಿಗೆ ಮಣೆ ಹಾಕುವ ಸಾಧ್ಯತೆ ಇದ್ದು, ರಾಜ್ಯಗಳ ಎಲೆಕ್ಷನ್ ಹಾಗೂ ಲೋಕಸಭಾ ಚುನಾವಣೆ ಮೇಲೆ ಕಣ್ಣು ಇಡಲಾಗಿದೆ. ಸಂಪುಟ ವಿಸ್ತರಣೆಯಾದ್ರೆ ಕರ್ನಾಟಕಕ್ಕೂ ಆದ್ಯತೆ ಸಿಗುತ್ತಾ ಎಂಬ ಪ್ರಶ್ನೆ ಮೂಡಿದೆ. ಸಂಕ್ರಾಂತಿಯ ಬಳಿಕ ಅಥವಾ ಫೆಬ್ರವರಿಯಲ್ಲಿ ಬಜೆಟ್ ಮಂಡನೆಯ ಒಳಗಾಗಿ ಸಚಿವ ಸಂಪುಟದ ವಿಸ್ತರಣೆ ಸಾಧ್ಯತೆ ಇದೆ. 2023ರಲ್ಲಿ 5 ರಾಜ್ಯಗಳಲ್ಲಿ ಚುನಾವಣೆ ಇದೆ. ಅದರಲ್ಲಿ ಕರ್ನಾಟಕದಲ್ಲೂ ಚುನಾವಣೆ ಇರುವುದರಿಂದ ಸಂಪುಟದಲ್ಲಿ ಕರ್ನಾಟಕಕ್ಕೆ ಒಂದು ಚಾನ್ಸ್ ಇದೆ ಎನ್ನಲಾಗುತ್ತಿದೆ. ಒಂದು ಓಬಿಸಿ ಕೋಟಾ ಖಾಲಿಯಿದ್ದು ಅದನ್ನು ತುಂಬುವಂತ ಕಾರ್ಯ ಕರ್ನಾಟಕದಿಂದ ಆಗುತ್ತೆ ಎಂದು ಹೇಳಲಾಗುತ್ತಿದೆ.