userpic
user icon

ಪಾಕಿಸ್ತಾನ ನಿಜಬಣ್ಣ ಬಹಿರಂಗ: ಹಿಂದೂಗಳ ವಿರುದ್ಧ ಪಾಕ್ ಸೇನಾ ಮುಖ್ಯಸ್ಥ ವಿವಾದಾಸ್ಪದ ಹೇಳಿಕೆ

Sathish Kumar KH  | Published: Apr 24, 2025, 4:20 PM IST

ಪಾಕಿಸ್ತಾನ ಸೇನೆಯ ಮುಖ್ಯಸ್ಥ ಸೈಯದ್ ಆಸೀಮ್ ಮುನೀರ್ ತಮ್ಮ ವಿವಾದಾಸ್ಪದ ಭಾಷಣದ ಮೂಲಕ ದೇಶದ ನಿಜಬಣ್ಣವನ್ನೇ ಬಹಿರಂಗಪಡಿಸಿದ್ದಾರೆ. ಸಾಗರೋತ್ತರ ಪಾಕಿಸ್ತಾನಿಗಳ ಸಭೆಯಲ್ಲಿ ಮಾತನಾಡಿದ ಮುನೀರ್, 'ನಾವು ಹಿಂದೂಗಳಿಂದ ಸಂಪೂರ್ಣವಾಗಿ ವಿಭಿನ್ನ. ಇದೇ ಎರಡು ರಾಷ್ಟ್ರ ಸಿದ್ಧಾಂತದ ಆಧಾರ' ಎಂದು ಹೇಳಿದ್ದಾರೆ. ಅಲ್ಲದೆ, 'ಕಾಶ್ಮೀರ ನಮ್ಮ ರಕ್ತನಾಳದಂತೆ' ಎಂದು ಹೇಳುವ ಮೂಲಕ ಕಾಶ್ಮೀರದ ಮೇಲೆ ಪಾಕಿಸ್ತಾನದ ಆಸೆಯನ್ನು ಮತ್ತೆ ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆಗಳು ಭಾರತದಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿವೆ. ಪಾಕಿಸ್ತಾನದ ಹಿಂದೂ ವಿರೋಧಿ ನಿಲುವು ಮತ್ತು ಕಾಶ್ಮೀರ ಆಕ್ರಮಣಶೀಲತೆಯು ಮತ್ತೆ ಬೆಳಕಿಗೆ ಬಂದಿದೆ.

ಕಾಶ್ಮೀರದಲ್ಲಿ ನಡೆದ ಉಗ್ರಗಾಮಿಗಳ ಹಿಂದೂ ನರಮೇಧ ಕೃತ್ಯದಲ್ಲಿ ಪಾಕಿಸ್ತಾನ ಸೇನೆಯ ಕೈವಾಡ ಇಲ್ಲದೇ ನಡೆದಿಲ್ಲ ಎಂಬ ಶಂಕೆ ವ್ಯಕ್ತವಾಗಿದೆ. ಇದರ ಬೆನ್ನಲ್ಲಿಯೇ ಕಾಶ್ಮೀರದ ಘಟನೆಯನ್ನು ಖಂಡಿಸದೇ ಉಗ್ರರಿಗೆ ಬೆಂಬಲ ನೀಡುವಂತಹ ಹೇಳಿಕೆಗಳನ್ನು ಪಾಕಿಸ್ತಾನ ಸೇನೆ ಮುಖ್ಯಸ್ಥ ನೀಡುತ್ತಿದ್ದಾನೆ. ಇನ್ನು ಪಾಕಿಸ್ತಾನ ರಕ್ಷಣಾ ಸಚಿವೆಯೂ ಕೂಡ ಭಾರತವೇನಾದರೂ ದಾಳಿ ಮಾಡಿದಲ್ಲಿ ಪಾಕಿಸ್ತಾನವೂ ತಕ್ಕ ಪ್ರತಿದಾಳಿಯ ಮೂಲಕ ಉತ್ತರ ಕೊಡುವುದಾಗಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಭಾರತದ ಮೇಲೆ ಕಾಲ್ಕೆರೆದು ಯುದ್ಧ ಮಾಡುವುದಕ್ಕೆಂದೇ ಸಿದ್ಧವಾದಂತೆ ಕಾಣುತ್ತಿದೆ.

Must See