ಪಾಕಿಸ್ತಾನಕ್ಕೆ ಭಾರತದ ಪ್ರತೀಕಾರ: ಮೋದಿ ಮುಂದಿನ ನಡೆ ಏನು?
ವೆಕೇಷನ್ಗೆ ಅಂತ ಹೋದವರು ಕಿರಾತಕರ ಗುಂಡೇಟಿಗೆ ಬಲಿಯಾದ್ರು. ಹತ್ತಾರು ಹೆಣ್ಣುಮಕ್ಕಳು ಗಂಡನನ್ನ ಕಳೆದುಕೊಂಡರು.. ಮಕ್ಕಳು ತಂದೆಯನ್ನ ಕಳೆದುಕೊಂಡರು. ಆದರೆ ಅವರ ಕಣ್ಣೀರಿಗೆ ಬೆಲೆ ಇಲ್ವಾ? ಖಂಡಿತ ಇದೆ. ಅದೇ ಕಾರಣಕ್ಕೆ ಇಡೀ ದೇಶ ಇವತ್ತು ಪ್ರತೀಕಾರದ ಮಾತನ್ನಾಡುತ್ತಿರೋದು. ಆದ್ರೆ ಆ ಪ್ರತೀಕಾರ ಹೇಗೆ ಆಗುತ್ತೆ ಅನ್ನೋದನ್ನ ಮೋದಿ ಡಿಸೈಡ್ ಮಾಡಬೇಕು. ಈಗಾಗಲೇ ವಾಯು ಮತ್ತು ಭೂ ಸೇನೆ ಮೂಲಕ ಪಾಕಿಸ್ತಾನಕ್ಕೆ ಹೊಡೆತ ಕೊಟ್ಟಿರೋ ಭಾರತ ಈಗ ಏನ್ಮಾಡುತ್ತೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. 26 ಅಮಾಯಕ ಜನರ ಸಾವಿಗೆ ಕಾರಣರಾದವರನ್ನ ಹೇಗೆ ಹೊಡೀತ್ತಾರೆ ಅನ್ನೋದು ಈಗ ಎಲ್ಲರ ಪ್ರಶ್ನೆಯಾಗಿದೆ. ಆದ್ರೆ ಸದ್ಯ ಭಾರತಕ್ಕಿರುವ ಆಪ್ಷನ್ ಏನು?
ಪಹಲ್ಗಾಮ್ ದಾಳಿಯ ನಂತರ ಕಾಶ್ಮೀರಿ ಮುಸ್ಲಿಂ ಯುವಕನೋರ್ವನ ವೀಡಿಯೋ ಸಖತ್ ವೈರಲ್: ಆತ ಹೇಳಿದ್ದೇನು
ಪಾಕಿಸ್ತಾನದ ಈ ನಡೆಯೇ ಅವರಿಗೆ ಎಷ್ಟು ಭಯ ಹುಟ್ಟಿದೆ ಅನ್ನೋದನ್ನ ತೋರಿಸುತ್ತಿದೆ. ಏರ್ ಸ್ಟ್ರೈಕ್ ಆಯ್ತು. ಸರ್ಜಿಕಲ್ಲೂ ಆಯ್ತು, ಭಾರತ ಈ ಬಾರಿ ನೇವಿಯನ್ನ ಬಳಿಸಿ ನಮ್ಮ ಮೇಲೆ ದಾಳಿ ಮಾಡಬಹುದು ಅಂತ ಬೆದರಿಬಿಟ್ಟಿದೆ. ಅದ್ರೆ ಮೋದಿ ತಲೆಯಲ್ಲಿ ಓಡ್ತಿರೋದೇ ಬೇರೆ. ಹಾಗಾದ್ರೆ ಈಗ ಮೋದಿ ಏನ್ಮಾಡ್ತಾರೆ? ಪಾಕಿಗಳ ಹುಟ್ಟಡಗಿಸಲು ಸರ್ಕಾರದ ಮುಂದಿರುವ ಆಯ್ಕೆಗಳೇನು ಅನ್ನೋ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.