
Ram Mandir: ಶ್ರೀರಾಮನಿಗೆ ಮುಸ್ಲಿಮರಿಂದ ಪಾದುಕೆ ಅರ್ಪಣೆ..ಮೂರ್ತಿ ಕೆತ್ತನೆ..!
ಕಾಶಿಗೆ ‘ರಾಮಜ್ಯೋತಿ’ ತರಲು ಹೊರಟ ಮುಸ್ಲಿಂ ಯುವತಿಯರು..!
1425ಕಿ.ಮೀ ದೂರದಿಂದ ಶ್ರೀರಾಮನ ದರ್ಶನಕ್ಕೆ ಹೊರಟ ಯುವತಿ
ಅಯೋಧ್ಯಾ ರಾಮ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಕ್ಷಣಗಣನೆ
ಇದೇ ಜನವರಿ 22ರಂದು ರಾಮ ಮಂದಿರ(Ram Mandir) ಉದ್ಘಾಟನೆ ಆಗಲಿದೆ. ಈ ಶುಭಗಳಿಗೆಗೆ ಕೋಟ್ಯಾಂಟರ ರಾಮ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಕೇವಲ ಹಿಂದೂಗಳ(Hindus) ಅಲ್ಲದೇ ಮುಸ್ಲಿಮರು(Muslims) ಸಹ ರಾಮನನ್ನು ನೋಡಲು ಕಾಯುತ್ತಿದ್ದಾರೆ. ಕೆಲ ಮುಸ್ಲಿಂ ಯುವತಿಯರು ರಾಮಜ್ಯೋತಿ(Ramajyoti) ತರಲು ಕಾಶಿಗೆ ಹೊರಟಿದ್ದಾರೆ. ಇನ್ನೂ ಮತ್ತೋರ್ವ ಯುವತಿ 1425 ಕಿ.ಮೀ ದೂರದಿಂದ ಶ್ರೀರಾಮನ(Sri ದರ್ಶನಕ್ಕೆ ಹೊರಟಿದ್ದಾಳೆ. ಕೆಲವರು ಶ್ರೀರಾಮನಿಗೆ ಪಾದುಕೆಯನ್ನು ಅರ್ಪಣೆ ಮಾಡಿದ್ದಾರೆ. ಅಲ್ಲದೇ ಮುಸ್ಲಿಂ ಟೈಲರ್ರೊಬ್ಬರು ಹನುಮಾನ್ ಧ್ವಜವನ್ನು ಹೊಲಿದಿದ್ದಾರೆ. ಇನ್ನೂ ಜಲಾಭಿಷೇಕಕ್ಕೆ ಇರಾನ್ನಿಂದ ಮುಸ್ಲಿಂ ಮಹಿಳೆಯೊಬ್ಬರು ನೀರನ್ನು ಕಳುಹಿಸಿದ್ದಾರೆ.ಶಬನಮ್ ಎಂಬ ಯುವತಿ ಮುಂಬೈನಿಂದ ಅಯೋಧ್ಯೆಯವರೆಗೂ ಪಾದಯಾತ್ರೆ ಮಾಡಿದ್ದಾರೆ.
Add Asianetnews Kannada as a Preferred Source

ಇದನ್ನೂ ವೀಕ್ಷಿಸಿ: ಡೆಡ್ಲಿ ವೆಪನ್ಸ್ ಮುಂದಿಟ್ಕೊಂಡು ಯುದ್ಧಕ್ಕೆ ಹೊರಟ ಕಿಮ್..! ಶತ್ರುರಾಷ್ಟ್ರಗಳ ಮೇಲೆ ಕಣ್ಣಿಟ್ಟಿರೋ ಐಲು ದೊರೆ..!