
News Hour: ತಪ್ಪಿಸಿಕೊಂಡ್ರೆ ಮತ್ತೆ ಪರೀಕ್ಷೆ ಇಲ್ಲ... ಸಲಾಂ ಮಂಗಳಾರತಿ ಬೇಡ!
* ಎಸ್ ಎಸ್ ಎಲ್ ಸಿ ಪರೀಕ್ಷೆ; ಸಮವಸ್ತ್ರ ಕಡ್ಡಾಯ
* ಮಿಸ್ ಮಾಡಿದ್ರೆ ಮತ್ತೆ ಪರೀಕ್ಷೆ ಇಲ್ಲ
* ಸಲಾಂ ಮಂಗಳಾರತಿ ಹೆಸರು ತೆಗೆಯಿರಿ
*ನಾನು ಸ್ವಾಮೀಜಿಗಳ ಅವಹೇಳನ ಮಾಡಿಲ್ಲ
ಬೆಂಗಳೂರು( ಮಾ. 26) ಸಮವಸ್ತ್ರ ಕಡ್ಡಾಯ ಎಂಬ ಹೈಕೋರ್ಟ್ (Karnataka High Court) ಆದೇಶವನ್ನು ಪಾಲನೆ ಮಾಡಬೇಕು ಎಂದು ಸರ್ಕಾರ ತಿಳಿಸಿದೆ. ಎಸ್ ಎಸ್ ಎಲ್ ಸಿ (SSLC) ಪರೀಕ್ಷೆ ಆರಂಭವಾಗಲಿದ್ದು ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ. ನಾವು ಹೈಕೋರ್ಟ್ ಆದೇಶವನ್ನು ಪಾಲನೆ ಮಾಡುತ್ತೇವೆ. ಹಿಜಾಬ್ (Hijab)ವಿಚಾರದಲ್ಲಿ ಪರೀಕ್ಷೆ ಮಿಸ್ ಮಾಡಿಕೊಂಡರೆ ಮತ್ತೊಮ್ಮೆ ಬರೆಯಲು ಅವಕಾಶ ಇಲ್ಲ ಎಂದು ಶಿಕ್ಷಣ ಸಚಿವರು ಸ್ಪಷ್ಟವಾಗಿ ತಿಳಿಸಿದ್ದಾರೆ.##
Add Asianetnews Kannada as a Preferred Source

BJP Leaders ಫೋಟೋ ತೆಗೆದಿದ್ದು ನಾನು, ಕ್ರೆಡಿಟ್ ಕಸಿದ ಸುದ್ಧಿ ಸಂಸ್ಥೆ ಕಾಲೆಳೆದ ಸ್ಮೃತಿ ಇರಾನಿ!
ಸಲಾಂ ಮಂಗಳಾರತಿ (Salam Mangalarathi) ಎಂಬ ಹೆಸರನ್ನು ಕೈಬಿಡಿ ಎಂದು ವಿಶ್ವ ಹಿಂದು ಪರಿಷತ್ (VHP)ಒತ್ತಾಯ ಮಾಡಿದೆ. ಸಲಾಂ ಹೆಸರಿನಲ್ಲಿ ಮಂಗಳಾರತಿ ಮಾಡುವುದು ಗುಲಾಮಗಿರಿಯ ಸಂಕೇತ ಎಂದು ಆಕ್ರೋಶ ಹೊರಹಾಕಿದೆ. ನನಗೆ ಸ್ವಾಮೀಜಿಗಳ ಬಗ್ಗೆ ಗೌರವ ಇದೆ. ಯಾವ ಕಾರಣಕ್ಕೂ ಅವರನ್ನು ಅವಹೇಳನ ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ