
ಪಾಲಿಕೆ ಫಲಿತಾಂಶ..ಯಾರಿಗೆ ಲಾಭ? ಯಾರಿಗೆ ನಷ್ಟ? ಕಟೀಲ್ ಬಾಂಬ್!
* ಬೆಳಗಾವಿಯಲ್ಲಿ ಅರಳಿದ ಕಮಲ, MES ಧೂಳೀಪಟ
* ಪಾಲಿಕೆ ಫಲಿತಾಂಶದ ನಡುವೆ ಕಾಂಗ್ರೆಸ್ ಮೇಲೆ ಕಟೀಲ್ ಬಾಂಬ್!
* ಬಿಎಸ್ವೈ ಇಲ್ಲದ ಮೊದಲ ಚುನಾವಣಾ ಸಮರದಲ್ಲಿ ಬೊಮ್ಮಾಯಿಗೆ ಗೆಲವು
* ಅಫ್ಘಾನಿಸ್ತಾನದ ಸದ್ಯದ ಸ್ಥಿತಿ ಏನಾಗಿದೆ?
ಬೆಂಗಳೂರು(ಸೆ. 06) 3 ಮಹಾನಗರ ಪಾಲಿಕೆಗಳ ಚುನಾವಣೆಯ ಸಂಪೂರ್ಣ ಫಲಿತಾಂಶ ಇಂದು (ಸೆ.06) ಹೊರಬಿದ್ದಿದೆ. ಬೆಳಗಾವಿಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕರೇ ಕಲಬುರಗಿ ಹಾಗೂ ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದೇ ಅತಂತ್ರವಾಗಿದೆ. ಈ ನಡುವೆ ಕಟೀಲ್ ಬಾಂಬ್ ಎಸೆದಿದ್ದಾರೆ. ಸೋತರೂ ಕಾಂಗ್ರೆಸ್ ನಾಯಕರು ಅದನ್ನೇ ಸಮರ್ಥನೆ ಮಾಡಿಕೊಂಡಿದ್ದಾರೆ.
ಪಾಲಿಕೆ ಫಲಿತಾಂಶದ ನಂತರ ಸಿದ್ದರಾಮಯ್ಯ ಮನದ ಮಾತು
Add Asianetnews Kannada as a Preferred Source

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಸರ್ಕಾರ ರಚಿಸಲು ಹೆಣಗಾಡುತ್ತಿದೆ. ಹಕ್ಕಾನಿ ಹಾಗೂ ತಾಲಿಬಾನ್ ನಡುವೆ ಅಧ್ಯಕ್ಷ ಪಟ್ಟ, ಸಚಿವ ಸ್ಥಾನಕ್ಕೆ ಗುಂಡಿನ ಜಗಳವೇ ನಡೆದಿದೆ. ಇದರಲ್ಲಿ ತಾಲಿಬಾನ್ ಮುಖ್ಯಸ್ಥ ಬರಾದಾರ್ ಆಸ್ಪತ್ರೆ ದಾಖಲಾಗಿದ್ದಾನೆ. ಇತ್ತ ತಾಲಿಬಾನ್ ಜೊತೆ ಸೇರಿದ ಪಾಕಿಸ್ತಾನ ಸೇನೆ ಪಂಜಶೀರ್ ಮೇಲೆ ದಾಳಿ ಮಾಡಿದೆ.