Asianet Suvarna News Asianet Suvarna News

ಉಪಕಣದಲ್ಲಿ ಮನೆ ಕಟ್ಟುವ ಸಮರ... ಭೀಮಾ ತೀರದಲ್ಲಿ ಮತ್ತೆ ಕೊಲೆ!

*  ಬಾಂಗ್ಲಾ ಹಿಂಸಾಚಾರ ಖಂಡಿಸಿ ಯುವ ಬ್ರಿಗೇಡ್ ಪ್ರತಿಭಟನೆ
* ಉಪಚುನಾವಣಾ ಕಣದಲ್ಲಿ ಅಭಿವೃದ್ಧಿ ಮಾತು
* ನೀವು ಕಟ್ಟಿಸಿದ ಮನೆ ಎಲ್ಲಿದೆ ಸಿದ್ರಾಮಯ್ಯನವರೆ'?
* ತಣ್ಣಗಾಗಿದ್ದ ಭೀಮಾ ತೀರದಲ್ಲಿ ಮತ್ತೊಂದು ಕೊಲೆ?

ಬೆಂಗಳೂರು(ಅ. 23)   ಉಪಚುನಾವಣಾ (Karnataka By Poll) ಕಣದಲ್ಲಿ ವಾಕ್ ಸಮರವೇ ಸೃಷ್ಟಿಯಾಗಿದೆ. ಸಿದ್ದರಾಮಯ್ಯ(Siddaramaiah) ಒಬ್ಬ ಬುರುಡೆ ರಾಮಯ್ಯ ಎಂದು ಬಿಜೆಪಿ  (BJP) ಟಾಂಗ್ ಕೊಟ್ಟಿದೆ.  ಇದಕ್ಕೆ ಸಿದ್ದರಾಮಯ್ಯ ಸಹ ತಿರುಗೇಟು  ಕೊಟ್ಟಿದ್ದಾರೆ. ಕೊನೆಗೂ ಅಭಿವೃದ್ಧಿ ಹೆಸರಿನಲ್ಲಿ ನಾಯಕರು ಮಾತನಾಡಿದ್ದಾರೆ. ಎಷ್ಟು ಮನೆ ಕಟ್ಟಿಸಿ ಕೊಟ್ರಿ ಎಂದು ಬಿಜೆಪಿ ಸಿದ್ದರಾಮಯ್ಯಗೆ ಸವಾಲು ಹಾಕಿದ್ದಾರೆ. 

ರಾಜಕಾರಣದಲ್ಲಿ ಸತ್ಯ ಸತ್ತೋಗಿದೆ ಎಂದ ದೇವೇಗೌಡ

ಬಾಂಗ್ಲಾದೇಶದಲ್ಲಿ(Bangladesh) ಹಿಂದುಗಳ (Hindu) ಮೇಲೆ  ಹಿಂಸಾಚಾರ ನಡೆಯುತ್ತಿರುವುದನ್ನು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಖಂಡಿಸಿದ್ದಾರೆ. ಬೆಂಗಳೂರಿನಲ್ಲಿ ಪಂಜಿನ ಮೆರವಣಿಗೆ ನಡೆಸಲಾಗಿದೆ.  ಭೀಮಾತೀರದಲ್ಲಿ ಮತ್ತೊಂದು ಕೊಲೆಯಾಗಿರುವ ಶಂಕೆ ಉಂಟಾಗಿದೆ. ಅಂತರ್ಧರ್ಮೀಯ ಜೋಡಿಯ ಪ್ರೇಮ ಪ್ರಕರಣ ಕೊಲೆಯಲ್ಲಿ ಅಂತ್ಯವಾಯ್ತಾ? ಏನಿದು ಪ್ರಕರಣ.. ಇಡೀ ದಿನದ ಸುದ್ದಿ  ನ್ಯೂಸ್ ಅವರ್ ನಲ್ಲಿ..ಹಾನಗಲ್ ಹಾಗೂ ಸಿಂದಗಿ ಕ್ಷೇತ್ರಗಳಿಗೆ ಅಕ್ಟೋಬರ್ 30ರಂದು ಚುನಾವಣೆ ನಡೆಯಲಿದೆ. ನವೆಂಬರ್ 2ರಂದು ಮತ ಎಣಿಕೆ ಮತ್ತು ಫಲಿತಾಂಶ. 

 

 

Video Top Stories