'ರಾಜಕಾರಣದಲ್ಲಿ ಸತ್ಯ ಸತ್ತೋಗಿದೆ...ದೋಸ್ತಿಗೆ ಡೇ ಒನ್‌ನಿಂದ ಕಾಟ ಕೊಟ್ಟೋರು ಯಾರು?'

*ಕರ್ನಾಟಕದಲ್ಲಿ ರಂಗೇರಿದ ಉಪಚುನಾವಣಾ ಕಣ
* ಸಿದ್ದರಾಮಯ್ಯ ಮೇಲೆ ಎಚ್‌ಡಿ ದೇವೇಗೌಡ ಕೆಂಡಾಮಂಡಲ
* ಸಾಲ ಮನ್ನಾ ವಿಚಾರದಲ್ಲಿ ಮುಂದುವರಿದ ಸಮರ
* ಹಾನಗಲ್ ಮತ್ತು ಸಿಂಧಗಿ  ಕ್ಷೇತ್ರಕ್ಕೆ ಚುನಾವಣೆ

Share this Video
  • FB
  • Linkdin
  • Whatsapp

ವಿಜಯಪುರ (ಅ. 23) ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah)ವಿರುದ್ಧ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು (HD Devegowda) ಸಿಡಿದೆದ್ದಿದ್ದಾರೆ. ನನಗೆ ಕಾಂಗ್ರೆಸ್ (Congress) ಜತೆ ಕೈ ಜೋಡಿಸುವ ಯಾವ ಆಸೆಯೂ ಇರಲಿಲ್ಲ ಎಂದು ಹೇಳಿದರು. ದೋಸ್ತಿ ಸರ್ಕಾರ ಮೊದಲ ದಿನದಿಂದ ಉಳಿಯಲೇಬಾರದು ಎಂದು ತಂತ್ರ ರೂಪಿಸಿದ್ದೇ ಸಿದ್ದರಾಮಯ್ಯ ಎಂದು ದೇವೇಗೌಡರು ಹೇಳಿದ್ದಾರೆ.

Add Asianetnews Kannada as a Preferred SourcegooglePreferred

'ಮನೆ ಎಲ್ರೀ... ಸಿದ್ದರಾಮಯ್ಯ ಒಬ್ಬ ಬುರುಡೆ ರಾಮಯ್ಯ'

ರೈತರ ಸಾಲ ಮನ್ನಾ ಮಾಡಿದ್ದು ಕುಮಾರಸ್ವಾಮಿ (HD Kumaraswamy) ಅಲ್ಲ ಎಂದು ಹೇಳಿರುವುದಕ್ಕೆ ಕೆಂಡಾಮಂಡಲವಾಗಿದ್ದಾರೆ. ಸಿಂಧಗಿ (Sindhagi) ಮತ್ತು ಹಾನಗಲ್ (Hangal) ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಹಾನಗಲ್ ಹಾಗೂ ಸಿಂದಗಿ ಕ್ಷೇತ್ರಗಳಿಗೆ ಅಕ್ಟೋಬರ್ 30ರಂದು ಚುನಾವಣೆ ನಡೆಯಲಿದೆ. ನವೆಂಬರ್ 2ರಂದು ಮತ ಎಣಿಕೆ ಮತ್ತು ಫಲಿತಾಂಶ. 

Related Video