Asianet Suvarna News Asianet Suvarna News

ಮುಗಿಯದ 'RSS' ವಾಕ್ ಸಮರ,  ಈಶ್ವರಪ್ಪ ಎಂಥಾ ಮಾತು!

* ನಾನು ಯಾವ ಕಾಲದಲ್ಲಿಯೂ RSS ಹೊಗಳಿಲ್ಲ
* ಬಿಜೆಪಿ ನಾಯಕರ ಮಾತಿಗೆ ದೇವೇಗೌಡ ತಿರುಗೇಟು
*  'ಕುಮಾರಸ್ವಾಮಿ ಯಾವ ಲೆಕ್ಕನ್ರಿ' ಎಂದ ಈಶ್ವರಪ್ಪ
* ಮೈಸೂರು ಕೋರ್ಟ್ ಬಾಂಬ್ ಬ್ಲಾಸ್ಟ್ ಆರೋಪಿಗಳಿಗೆ ಶಿಕ್ಷೆ

ಬೆಂಗಳೂರು(ಅ.  08)  ಆರ್‌ ಎಸ್‌ ಎಸ್‌ (RSS) ಕುರಿತು ಹುಟ್ಟಿಕೊಂಡ ನಾಯಕರ ನಡುವಿನ ವಾಕ್ ಸಮರ ಮುಗಿದಿಲ್ಲ.  ಎಚ್‌ಡಿ ಕುಮರಸ್ವಾಮಿ (HD Kumaraswamy)ಆರ್‌ ಎಸ್‌ ಎಸ್‌ ಬಗ್ಗೆ ಮಾತನಾಡಲು ಯಾವ ಲೆಕ್ಕ ಎಂದು ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಆಕ್ರೋಶ ಹೊರ ಹಾಕಿದ್ದರೆ ಇದಕ್ಕೆ ಕುಮಾರಸ್ವಾಮಿ ಸಹ ಕೌಂಟರ್ ಕೊಟ್ಟಿದ್ದಾರೆ. 

ಮುಸ್ಲಿಂ ಅಭ್ಯರ್ಥಿ.. ಎಲ್ಲ ಆರೋಪಗಳಿಗೆ ದೇವೇಗೌಡರ ಸ್ಪಷ್ಟ ಉತ್ತರ!

ಆರ್‌ಎಸ್‌ಎಸ್‌ (RSS) ಹೊಗಳಿದ್ದರು ಎನ್ನುವ ಮಾತುಗಳು ಹಾಗೂ ನಾಯಕರ ಪೋಸ್ಟ್‌ಗೆ ಸ್ವತಃ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ (HD Devegowda) ಅವರು ಟಾಂಗ್ ಕೊಟ್ಟಿದ್ದಾರೆ.   ಮೈಸೂರು ಕೋರ್ಟ್ ಬಾಂಬ್ ಬ್ಲಾಸ್ಟ್ ಮಾಡಿದ್ದವರಿಗೆ ಶಿಕ್ಷೆ ಪ್ರಕಟವಾಗಿದೆ. ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಎನ್‌ಐಎ ತನಿಖೆ ನಡೆಸಿ ವರದಿ ಸಲ್ಲಿಸಿತ್ತು. ಸೋಮವಾರ ಶಿಕ್ಷೆ ಪ್ರಮಾಣ ನಿಗದಿಯಾಗಲಿದೆ.

Video Top Stories