
News Hour: ಸಿಟಿ ರವಿ ಹೇಳಿದ ರೊಟ್ಟಿ ಜಾರಿ ತುಪ್ಪದ ಮೇಲೆ ಬಿದ್ದಿರುವ ಕೈ ಕತೆ!
* ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದರೆ ನಮಗೆ ಒಳ್ಳೆಯದು!
* ವಿಜಯೇಂದ್ರ ಸಂಪುಟಕ್ಕೆ ಬರ್ತಾರಾ? ಅವರೇ ಕೊಟ್ರು ಸ್ಪಷ್ಟನೆ
* ಸಿಪಿವೈ ವರ್ಸಸ್ ಎಚ್ಡಿಕೆ... ರಾಸಲೀಲೆ ರಾದ್ದಾಂತ !
*ಹತ್ತೊಂಭತ್ತನೇ ದಿನಕ್ಕೆ ಕಾಲಿಟ್ಟ ಯುದ್ಧ
ಬೆಂಗಳೂರು(ಮಾ. 14) ಸಿಟಿ ರವಿ ರಾಜಕಾರಣದ (Karnataka Politiucs) ವಿಚಾರ ಮಾತನಾಡಿದ್ದಾರೆ. ಅಸಮರ್ಥರಿದ್ದರೆ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ರವಿ (CT Ravi) ಹೇಳಿದ್ದಾರೆ. ನಾನು ಸಂಪುಟಕ್ಕೆ ಬರುವ ವಿಚಾರ ಸತ್ಯಕ್ಕೆ ದೂರವಾಗಿದ್ದು.. ನಾನು ಪಕ್ಷ ಸಂಘಟನೆ ವಿಚಾರದಲ್ಲಿ ಕಾರ್ಯನಿರತನಾಗಿರುತ್ತೇನೆ ಎಂದು ತಿಳಿಸಿದರು .
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸಿಪಿ ಯೋಗೇಶ್ವರ ಮತ್ತು ಎಚ್ಡಿ ಕುಮಾರಸ್ವಾಮಿ ಏಕವಚನದಲ್ಲಿ ಕಿತ್ತಾಡಿಕೊಂಡಿದ್ದಾರೆ. ಜನರನ್ನು ಯಾಮಾರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಅಖಾಡಕ್ಕೆ ಬನ್ನಿ ಎಂದು ಸವಾಲು ಎಸೆದಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಣ ಸಮರ(Russia Ukraine War ) ಮುಂದುವರಿದೇ ಇದೆ. ಈ ನಡುವೆ ಅಮೆರಿಕ ತನ್ನ ದೇಶದ ನಾಗರಿಕರು ಅಲ್ಲಿಂದ ಹೊರಕ್ಕೆ ಬರುವಂತೆ ಕೇಳಿಕೊಂಡಿದೆ.