
ಮೋದಿ ಆದೇಶ.. ಶಾಂತಿ ಸಂದೇಶ.. ಏನಿದರ ಗುಟ್ಟು? ಜಗತ್ತನ್ನೇ ಗೆಲ್ಲಲು ಸಿದ್ಧವಾದ ರಣತಂತ್ರವೇನು ಗೊತ್ತಾ?
ಮೋದಿ, ಭಾರತ ನೇತೃತ್ವದಲ್ಲಿ ಉಕೇನ್ ಹಾಗೂ ರಷ್ಯಾ ನಡುವಿನ ಮಧ್ಯಸ್ಥಿಕೆ ಸಾಧ್ಯವಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ ಬಳಿಕ ಶಾಂತಿ ಸ್ಥಾಪನೆಗೆ ಭಾರತ ಸಿದ್ದವಾಗಿದೆ.
ಬೆಂಗಳೂರು (ಸೆ. 10): ಪುಟಿನ್ ಕೊಟ್ಟಿದ್ದು ಒಂದೇ ಒಂದು ಸುಳಿವು.. ಅದನ್ನ ಕೇಳ್ತಿದ್ದ ಹಾಗೇ ಸಿದ್ಧವಾಯ್ತು ಭಾರತ.. ರಣರಂಗದಲ್ಲಿ ಶ್ವೇತ ಪತಾಕೆ ಹಾರಿಸೋಕೆ ರಣಧೀರ ಹೊರಟು ನಿಂತ.. ಮೋದಿ ಆದೇಶ.. ಶಾಂತಿ ಸಂದೇಶ.. ಜಗತ್ತನ್ನೇ ಗೆಲ್ಲಲು ಸಿದ್ಧವಾದ ರಣತಂತ್ರವೇನು ಗೊತ್ತಾ? ಅಮೆರಿಕಾ ಹಾಗೂ ಯುರೋಪಿಯನ್ ರಾಷ್ಟ್ರಗಳು ಒಂದು ಕಡೆ, ಚೀನಾದಂಥಾ ದೈತ್ಯ ರಾಷ್ಟ್ರಗಳು ಇನ್ನೊಂದು ಕಡೆ.. ಇವರೆಲ್ಲರೂ ರಷ್ಯಾ ಉಕ್ರೇನ್ ಯುದ್ಧದ ಪರಿಣಾಮ ನೋಡೋದ್ರಲ್ಲಿ ಬ್ಯುಸಿಯಾಗಿದ್ರೆ, ಭಾರತ ಮಾತ್ರ ಈ ಇಬ್ಬರ ನಡುವೆ ಸಂಧಾನ ನಡೆಸೋ ಸಾಹಸದ ಮಾತಾಡಿತ್ತು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ