Asianet Suvarna News Asianet Suvarna News

I-N-D-I-A ಒಕ್ಕೂಟಕ್ಕೆ ಹೊರೆಯಾದ್ರಾ ಪ್ರಿಯಾಂಕಾ ಗಾಂಧಿ? ಯುಪಿ ಉಸ್ತುವಾರಿ ಜವಾಬ್ದಾರಿ ವಾಪಸ್!

ಲೋಕಸಭೆ ಚುನಾವಣೆಗೆ ಇಂಡಿ ಒಕ್ಕೂಟದ ಹೊಸ ಪ್ಲಾನ್, ಸಚಿವರ ಇದೆಂತಾ ಮಾತು, ಬರಗಾಲಕ್ಕೆ ಕಾಯ್ತಾರಾ ರೈತರು? ಹಿಂದಿ ಕಲಿತರೆ ಶೌಚಾಲಯ ಕ್ಲೀನ್ ಮಾಡುವುದು, ರಸ್ತೆ ಕ್ಲೀನ್ ಮಾಡಬೇಕಾಗುತ್ತದೆ ಎಂದ ದಯಾನಿಧಿ ಮಾರನ್ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

First Published Dec 25, 2023, 11:09 PM IST | Last Updated Dec 26, 2023, 3:30 PM IST

ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಕೆಲ ಮಹತ್ತರ ನಿರ್ಧಾರ ತೆಗೆದುಕೊಂಡಿದೆ. ಉತ್ತರ ಪ್ರದೇಶದ ಉಸ್ತುವಾರಿ ಜವಾಬ್ದಾರಿಯಿಂದ ಪ್ರಿಯಾಂಕ್ ಗಾಂಧಿಯನ್ನು ಮುಕ್ತಿಗೊಳಿಸಲಾಗಿದೆ. ಉತ್ತರ ಪ್ರದೇಶದಲ್ಲಿ 2019ರ ಲೋಕಸಭೆ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆ ಪ್ರಿಯಾಂಕಾ ಗಾಂಧಿ ಉಸ್ತುವಾರಿಯಲ್ಲಿ ಕಾಂಗ್ರೆಸ್ ಎದುರಿಸಿತ್ತು. ಆದರೆ ಹೀನಾಯ ಸೋಲು ಕಂಡಿತ್ತು. ಇದೀಗ ಲೋಕಸಭೆ ಚುನಾವಣೆಗೆ ಇಂಡಿ ಒಕ್ಕೂಟದ ರಚನೆಯಾಗಿದೆ. ಇದರ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ ಜವಾಬ್ದಾರಿಯನ್ನು ವಾಪಸ್ ಪಡೆಯಲಾಗಿದೆ. ಇದರ ಬೆನ್ನಲ್ಲೇ ಲೋಕಸಭೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸಲಿದ್ದಾರೆ ಅನ್ನೋ ಮಾತುಗಳು ಮತ್ತಷ್ಟು ಪುಷ್ಠಿ ನೀಡಿದೆ.

Video Top Stories