Asianet Suvarna News Asianet Suvarna News

ಲೋಕಸಭಾ ಚುನಾವಣೆ ಭವಿಷ್ಯ ನುಡಿದ ಪ್ರಶಾಂತ್ ಕಿಶೋರ್, ಯಾರಿಗೆ ವರ? ಯಾರಿಗೆ ಪಾಠ?

ಲೋಕಸಭಾ ಚುನಾವಣೆ 2024 ಸಮೀಪಿಸುತ್ತಿದೆ. ಸಮೀಕ್ಷೆ, ಲೆಕ್ಕಾಚಾರ ಸೇರಿದಂತೆ ಹಲವು ರೀತಿಯ ಚರ್ಚೆಗಳು ನಡೆಯುತ್ತಿದೆ. ಇದರ ನಡುವೆ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಈ ಭಾರಿಯ ಚುನಾವಣಾ ಭವಿಷ್ಯ ನುಡಿದಿದ್ದಾರೆ. ಪ್ರಶಾಂತ್ ಕಿಶೋರ್ ಹೇಳಿದ ಫಲಿತಾಂಶದ ಗುಟ್ಟೇನು?
 

ಲೋಕಸಭಾ ಚುನಾವಣೆ ಕಾವು ಜೋರಾಗಿದೆ. ಗೆಲುವಿಗಾಗಿ ಪ್ರಚಾರ, ತಂತ್ರಗಾರಿಗೆ , ಲೆಕ್ಕಾಚಾರಗಳು ಜೋರಾಗಿದೆ. ಒಂದಡೆ ಪ್ರಧಾನಿ ಮೋದಿ 3ನೇ ಬಾರಿ ಅಧಿಕಾರಕ್ಕೇರಲು ಬಿಜೆಪಿ ಸತತ ಕೆಲಸ ಮಾಡುತ್ತಿದೆ. ಇತ್ತ ಇಂಡಿಯಾ ಒಕ್ಕೂಟ ಮೈತ್ರಿ ಮೂಲಕ ಭಾರಿ ರಣತಂತ್ರ ಹೂಡಿದೆ. ದಕ್ಷಿಣ ಭಾರತದ ಬಲ ಇಂಡಿಯಾ ಒಕ್ಕೂಟಕ್ಕಿದೆ. ಹೀಗಾಗಿ  ಈ ಬಾರಿಯ ಚುನಾವಣೆ ಕುಹೂಲಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿ ಆಡಳಿತ, ಇಂಡಿಯಾ ಒಕ್ಕೂಟದ ಹೋರಾಟ ಈ ಚುನಾವಣೆಯಲ್ಲಿ ಯಾರಿಗೆ ಮೇಲುಗೈ ತರಲಿದೆ? ಮೋದಿ ಸ್ಟ್ರೆಂಥ್ ಏನು? ಕಾಂಗ್ರೆಸ್ ವೀಕ್ನೆಸ್ ಏನು? ಫಲಿತಾಂಶ ಯಾರಿಗೆ ವರ? ಈ ಕುರಿತು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಹೇಳುವುದೇನು?