Asianet Suvarna News Asianet Suvarna News

News Hour: ಹತ್ಯಾಕಾಂಡ ನೆಲದಲ್ಲಿ ಪರಿಹಾರದ ಪಾಲಿಟಿಕ್ಸ್‌, ಗ್ರಾಹಕರಿಗೆ ಮತ್ತೆ ಸಿಲಿಂಡರ್ ಬೆಲೆ ಶಾಕ್

ಉತ್ತರ ಪ್ರದೇಶದ (Uttar Pradesh) ಲಖೀಂಪುರ ರಣಾಂಗಣದಲ್ಲಿ ಹೈಡ್ರಾಮ ಮುಂದುವರೆದಿದೆ. ಬೆಲೆ ಏರಿಕೆಯಿಂದ ಕಂಗಾಲಾದ ಗ್ರಾಹಕರಿಗೆ ಕೇಂದ್ರ ಸರ್ಕಾರ ಮತ್ತೆ ಶಾಕ್ ಕೊಟ್ಟಿದೆ.  ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ....

ನವದೆಹಲಿ, (ಅ.06): ಉತ್ತರ ಪ್ರದೇಶದ (Uttar Pradesh) ಲಖೀಂಪುರ ರಣಾಂಗಣದಲ್ಲಿ ಹೈಡ್ರಾಮ ಮುಂದುವರೆದಿದ್ದು, ಹಿಂಸಾಚಾರ ಸ್ಥಳಕ್ಕೆ ರಾಹುಲ್, ಪ್ರಿಯಾಂಕಾ ಭೇಟಿಗೆ ಯೋಗಿ ಸರ್ಕಾರ ಅನುಮತಿ ನೀಡಿತು. ಇನ್ನು ಹತ್ಯಾಕಾಂಡ ನೆಲದಲ್ಲಿ ಪರಿಹಾರದ ಪಾಲಿಟಿಕ್ಸ್‌ ಸಹ ನಡೆದಿದೆ. ಇನ್ನು ರೈತ ಮುಖಂಡ ಟಿಕಾಯತ್ ದಿಲ್ಲಿ ಬಿಟ್ಟು  ಉತ್ತರ ಪ್ರದೇಶಕ್ಕೆ ದೌಡಾಯಿಸಿದ್ದಾರೆ. 

ಬೆಲೆ ಏರಿಕೆಯಿಂದ ಕಂಗಾಲಾದ ಗ್ರಾಹಕರಿಗೆ ಮತ್ತೆ ಶಾಕ್: ಸಿಲಿಂಡರ್ ಬೆಲೆ ಮತ್ತೆ ಹೆಚ್ಚಳ!

 ಅಕ್ಟೋಬರ್ ಮೊದಲ ದಿನವೇ ಪೆಟ್ರೋಲಿಯಂ ಕಂಪನಿಗಳು ಅನಿಲದ ಬೆಲೆಯನ್ನು ಹೆಚ್ಚಿಸಿದ್ದವು. ವಾಣಿಜ್ಯ ಸಿಲಿಂಡರ್​ಗಳ(Commercial Cylinder) ಬೆಲೆಯನ್ನು 43.5 ರೂಪಾಯಿಗಳಷ್ಟು ಏರಿಕೆ ಮಾಡಿದ್ದವು. ಆದ್ರೆ ಈಗ ಗ್ರಾಹಕರಿಗೆ ಎಲ್‌ಪಿಜಿ ಅಡುಗೆ ಸಿಲಿಂಡರ್ ದರ ಏರಿಕೆ ಶಾಕ್ ಕೊಟ್ಟಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ....

Video Top Stories