Asianet Suvarna News Asianet Suvarna News

News Hour: ದೇಶದಲ್ಲಿ ನಿಲ್ಲದ ವಕ್ಫ್​ ಮಂಡಳಿ ತುಘಲಕ್​ ದರ್ಬಾರ್!

ದೇಶದಲ್ಲಿ ವಕ್ಫ್‌ ಬೋರ್ಡ್‌ನ ತುಘಲಕ್‌ ದರ್ಬಾರ್‌ ನಿಲ್ಲುವಂತೆ ಕಾಣುತ್ತಿಲ್ಲ. ಬಿಹಾರದ ಒಂದಿಡೀ ಹಳ್ಳಿಯೇ ನಮ್ಮದು ಎಂದು ವಾದ ಮಾಡಿದ್ದು,  30 ದಿನದಲ್ಲೇ ಖಾಲಿ ಮಾಡುವಂತೆ ನೋಟಿಸ್ ಜಾರಿ ಮಾಡಿದೆ.

First Published Sep 18, 2024, 11:20 PM IST | Last Updated Sep 18, 2024, 11:20 PM IST

ನವದೆಹಲಿ (ಸೆ.18): ದೇಶದಲ್ಲಿ ಮತ್ತೆ ವಕ್ಫ್​ ಮಂಡಳಿ ಅಂಧಾದರ್ಬಾರ್​ ಕಾನೂನು ಮುಂದುವರಿದಿದೆ. ಬಿಹಾರದ ಇಡೀ ಹಳ್ಳಿಯೇ ನಮ್ಮದು ಎಂದು ಸುನ್ನಿವಕ್ಫ್​ ಬೋರ್ಡ್​ ಹೇಳಿದೆ. ಶೇ.95 ರಷ್ಟು ಹಿಂದೂಗಳ ಗ್ರಾಮವೇ ವಕ್ಫ್​ ಬೋರ್ಡ್​ ಆಸ್ತಿ ಎಂದು ಹೇಳುತ್ತಿದೆ.

30 ದಿನದಲ್ಲಿ ಗ್ರಾಮ ಖಾಲಿ ಮಾಡಲು ಬಿಹಾರದ ಗ್ರಾಮಸ್ಥರಿಗೆ ನೋಟಿಸ್‌ ನೀಡಲಾಗಿದೆ. ಗೋವಿಂದಪುರದ ಏಳು ಗ್ರಾಮಸ್ಥರಿಗೆ  ಈ ಕುರಿತಾಗಿ ವಕ್ಫ್‌ ನೋಟಿಸ್‌ ನೀಡಿದೆ. ಗ್ರಾಮಸ್ಥರ ಪರ ಹೈಕೋರ್ಟ್​ ತೀರ್ಪು ಬಂದಿದ್ದರೂ ಡೋಂಟ್​ಕೇರ್ ಎಂದಿದ್ದಾರೆ.

ವಕ್ಫ್ ತಿದ್ದುಪಡಿ ಮಸೂದೆ ಸಂವಿಧಾನ ವಿರೋಧಿ, ಜಾತ್ಯಾತೀತ ವಿರೋಧಿ: ಎಸ್‌ಡಿಪಿಐ

ಬ್ರಿಜೇಶ್ ಬಲ್ಲಭ್ ಪ್ರಸಾದ್, ರಾಜಕಿಶೋರ್ ಮೆಹ್ತಾ, ರಾಮ್‌ಲಾಲ್ ಸಾವೊ, ಮಾಲ್ತಿ ದೇವಿ, ಸಂಜಯ್ ಪ್ರಸಾದ್, ಸುದೀಪ್ ಕುಮಾರ ಹಾಗೂ  ಸುರೇಂದ್ರ ವಿಶ್ವಕರ್ಮ ಎನ್ನುವವರಿಗೆ ವಕ್ಫ್‌ ಬೋರ್ಡ್‌ ನೋಟಿಸ್‌ ನೀಡಿದೆ.