
ಆಂಧ್ರ ಪ್ರದೇಶದಲ್ಲಿ ಪವರ್ ಸ್ಟಾರ್ ಆಗಿರುವ ಕುಮಾರಸ್ವಾಮಿಯನ್ನು ರಾಜ್ಯ ಸರ್ಕಾರ ಕಡೆಗಣಿಸಿದ್ದೇಕೆ?
ಕರ್ನಾಟಕದ ದಳಪತಿ ಹೆಚ್ಡಿ ಕಮಾರಸ್ವಾಮಿ ಇದೀಗ ಆಂಧ್ರ ಪ್ರದೇಶದ ಪವರ್ ಸ್ಟಾರ್ ಆಗಿದ್ದಾರೆ. ಆದರೆ ಕರ್ನಾಟಕದಲ್ಲಿ ಸರ್ಕಾರ ಹೆಚ್ಡಿಕೆ ನಿರ್ಧಾರಗಳಿಗೆ ಸರ್ಕಾರ ಅಡ್ಡಿಯಾಗುತ್ತಿದೆ.
ಬೆಂಗಳೂರು(ಫೆ.09) ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿರುವ ಉಕ್ಕಿನ ಕಾರ್ಖಾನೆ ಮುಚ್ಚುವ ಹಂತದಲ್ಲಿತ್ತು. ಆದರೆ ಈ ಕಾರ್ಖಾನೆಗೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಮರುಜೀವ ನೀಡಿದ್ದಾರೆ. ಇದರ ಪರಿಣಾಮ ಕಾರ್ಖಾನೆ ಇದೀಗ ನಳನಳಿಸಲು ಆರಂಭಿಸಿದೆ. ಈ ಮೂಲಕ ಹೆಚ್ಡಿ ಕುಮಾರಸ್ವಾಮಿ ಆಂಧ್ರ ಪ್ರದೇಶದ ಪವರ್ ಸ್ಟಾರ್ ಆಗಿದ್ದಾರೆ. ಆದರೆ ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಹೆಚ್ಡಿಕೆ ಯೋಜನೆಗೆ ಅಡ್ಡಿಯಾಗುತ್ತಿದೆಯಾ? ಹೆಚ್ಡಿ ಕುಮಾರಸ್ವಾಮಿಯನ್ನು ಕಾಂಗ್ರೆಸ್ ಸರ್ಕಾರ ಕಡೆಗಣಿಸುತ್ತಿದೆಯಾ?