Asianet Suvarna News Asianet Suvarna News

Hathras Stampede Case : ಭೀಕರ ದುರಂತಕ್ಕೆ ಕಾರಣ ಕಾಲ್ತುಳಿತವೋ..? ಕಾರ್ಕೋಟಕವೋ..? ದೇವಮಾನವನ ಸತ್ಸಂಗದಲ್ಲಿ ಸಾವಿನ ಅಟ್ಟಹಾಸ!

ಭೋಲೆ ಬಾಬಾನ ವಿರುದ್ಧ ವಿಷಗಾಳಿಯ ಷಡ್ಯಂತ್ರ!
ಅಮಾಯಕರ ಪ್ರಾಣತೆಗೆದ ಶತ್ರುಗಳು ಯಾರು..?!
ಹಥ್ರಾಸ್ ಕಾಲ್ತುಳಿತಕ್ಕೂ ಮುನ್ನ ನಡೆದಿದ್ದೇನೇನು?

First Published Jul 9, 2024, 4:57 PM IST | Last Updated Jul 9, 2024, 4:57 PM IST

ದೇವಮಾನವನ ಸತ್ಸಂಗದಲ್ಲಿ (Satsang) ನಡೆದಿತ್ತು ನೂರಾರು ಜನರ ಪ್ರಾಣಹರಣ. ಉತ್ತರ ಪ್ರದೇಶದಲ್ಲಿ(Uttar Pradesh) ಫುಲ್ರೈ ಅನ್ನೋ ಪುಟ್ಟ ಹಳ್ಳಿ. ಆ ಹಳ್ಳಿ ಇದೆ ಅನ್ನೋ ಸಂಗತಿ, ಅದರ ಅಕ್ಕಪಕ್ಕದ ಜಿಲ್ಲೆಯವರಿಗಾದ್ರೂ ಗೊತ್ತಿದ್ಯೋ ಇಲ್ವೋ. ಆದ್ರೆ ಅದೊಂದು ದಾರುಣ ಘಟನೆಯಿಂದಾಗಿ (Hathras stampede) ಇಡೀ ದೇಶವೇ ಆ ಹಳ್ಳಿ ಕಡೆ ನೋಡೋ ಹಾಗಾಗಿದೆ. ಜುಲೈ 2ನೇ ತಾರೀಖು, ಹತ್ರಾಸ್‌ನಲ್ಲಿ ದೊಡ್ಡದೊಂದು ಸತ್ಸಂಗ ಏರ್ಪಟ್ಟಿತ್ತು. ಅದರಲ್ಲಿ ಭಾಗವಹಿಸೋಕೆ, ಅಲ್ಲಿಗೆ ಬರೋ ದೇವಮಾನವನ (Bhole Baba) ದರ್ಶನ ಪಡೆಯೋಕೆ, ಸುಮಾರು ಎರಡೂವರೆ ಲಕ್ಷ ಜನ ಸೇರಿದ್ರು. ಆದ್ರೆ, ಅಲ್ಲಿದ್ದ ಒಬ್ಬನೇ ಒಬ್ಬನಿಗೂ ಕೂಡ, ಕೆಲವೇ ಕ್ಷಣಗಳಲ್ಲಿ ನಡೆಯಬಾರದ ದುರಂತ ಘಟಿಸಲಿದೆ ಅನ್ನೋದು ಗೊತ್ತೇ ಇರ್ಲಿಲ್ಲ. ಆ ದುರಂತ ನುಂಗಿದ್ದು ಮಾತ್ರ ಬರೋಬ್ಬರಿ 121 ಜನರ ಪ್ರಾಣ ಕಳೆದುಕೊಂಡಿದ್ದರು. ಈ ಪ್ರೋಗ್ರಾಮ್ ನಡೆಸೋಕೆ, ವ್ಯವಸ್ಥಾಪಕರು ಪರ್ಮಿಷನ್ ಪಡೆದಾಗ, 80 ಸಾವಿರ ಜನ ಬರ್ತಾರೆ ಅಂತ ಕೇಳ್ಕೊಂಡಿದ್ರು. ಆದ್ರೆ, ಪ್ರವಚನ ಮುಗಿಯೋ ಹೊತ್ತಿಗೆ ಅಲ್ಲಿ ನೆರೆದಿದ್ದು, ಎರಡೂವರೆ ಲಕ್ಷ ಜನ. ಅಷ್ಟು ಜನರನ್ನ ಕಂಟ್ರೋಲ್ ಮಾಡೋದ್ರಲ್ಲಿ, ಅಲ್ಲಿದ್ದ ವ್ಯವಸ್ಥೆ ಸಂಪೂರ್ಣವಾಗಿ ಸೋತಿತ್ತು. ಅದರ ಪರಿಣಾಮ-ನೂರಾರು ಮಂದಿಯ ಪ್ರಾಣ ಹರಣ.

ಇದನ್ನೂ ವೀಕ್ಷಿಸಿ:  Bus Accident: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್: ಭೀಕರ ಅಪಘಾತದ ದೃಶ್ಯ ಪ್ರಯಾಣಿಕರ ಮೊಬೈಲ್‌ನಲ್ಲಿ ಸೆರೆ!