News Hour: ಕಾಂಗ್ರೆಸ್ ಬಯಲಿಗೆ ತಂದ ಕೇಸ್​ನಲ್ಲಿ ಅರವಿಂದ್‌ ಕೇಜ್ರಿವಾಲ್ ಅರೆಸ್ಟ್!


ಅಕ್ರಮ ಮದ್ಯನೀತಿ ಪ್ರಕರಣದಲ್ಲಿ ದೆಹಲಿಯ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರನ್ನು ದೆಹಲಿಯ ರೋಸ್‌ ಅವೆನ್ಯು ಕೋರ್ಟ್‌ 7 ದಿನ ಇಡಿ ಕಸ್ಟಡಿಗೆ ಒಪ್ಪಿಸಿದೆ. ಮಾರ್ಚ್‌ 28ರವರೆಗೆ ಅವರು ಇಡಿ ಕಸ್ಟಡಿಯಲ್ಲಿ ವಿಚಾರಣೆಗೆ ಒಳಪಡಲಿದ್ದಾರೆ.

Share this Video
  • FB
  • Linkdin
  • Whatsapp

ನವದೆಹಲಿ (ಮಾ.22): ದೆಹಲಿಯ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರ ಬಂಧನವನ್ನು ಕಾಂಗ್ರೆಸ್‌ ಪಕ್ಷ ಪ್ರಶ್ನೆ ಮಾಡುತ್ತಿದೆ. ಆದರೆ, ಈ ಪ್ರಕರಣವನ್ನು ಮೊದಲು ಬಯಲಿಗೆ ತಂದಿದ್ದೇ ಕಾಂಗ್ರೆಸ್‌ ಎಂದು ಬಿಜೆಪಿ ಹೇಳಿದೆ. ಪ್ರಕರಣದ ಕುರಿತಾಗಿ 2022ರ ಜುಲೈನಲ್ಲಿ ಕೇಜ್ರಿವಾಲ್ ವಿರುದ್ಧ ಕಾಂಗ್ರೆಸ್ ದೂರು ನೀಡಿತ್ತು. ಈಗ ದೆಹಲಿ ಕಾಂಗ್ರೆಸ್‌, ಕೇಜ್ರಿವಾಲ್‌ ಬಂಧನವನ್ನು ವಿರೋಧಿಸುತ್ತಿದೆ ಎಂದಿದೆ.

Add Asianetnews Kannada as a Preferred SourcegooglePreferred

ಅಂದು ದೆಹಲಿ ಕಾಂಗ್ರೆಸ್‌ನ ನಾಯಕರಾಗಿದ್ದ ಅಜಯ್‌ ಮಾಕೆನ್‌ ಪತ್ರಿಕಾಗೋಷ್ಠಿ ನಡೆಸಿ ಹಗರಣವನ್ನು ಬಯಲಿಗೆಳೆದಿದ್ದರು.' ಲಿಕ್ಕರ್ ಹಗರಣ ಈಗ ಬಟಾ ಬಯಲಾಗಿದೆ. ಇವರು ಕೋಟಿ ಕೋಟಿ ಹಣ ಲೂಟಿ ಹೊಡೆದಿದ್ದಾರೆ. ಅರವಿಂದ್​​ ಕೇಜ್ರಿವಾಲ್​ ತಮ್ಮ ಬ್ಯುಸಿನೆಸ್​ಗಾಗಿ ಪ್ರೈವೇಟ್ ವೋಲ್​​ಸೆಲ್ ಡಿಲರ್ಸ್​​ ಜೊತೆ ​ಸೇರಿಕೊಂಡು ಶೇ.5 ರಿಂದ ಶೇ12 ರಷ್ಟು ಕಮಿಷನ್​ ತಗೊಂಡಿದ್ದಾರೆ ಎಂದು ಆರೋಪ ಮಾಡಿದ್ದರು.

Breaking: ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ಗೆ 7 ದಿನ ಕಸ್ಟಡಿ!

ಅದರಲ್ಲಿ ಶೇ.6ರಷ್ಟು ಕಿಕ್​ಬ್ಯಾಕ್​​ ಅನ್ನು ಅರವಿಂದ್​ ಕೇಜ್ರಿವಾಲ್ ತಗೊಂಡಿದ್ದಾರೆ. 100 ಕೋಟಿ ಹಣವನ್ನ ಗೋವಾ ಚುನಾವಣೆಯಲ್ಲಿ ಬಳಸಿದ್ದಾರೆ. ಕೇಜ್ರಿವಾಲ್​ ಈಗ ಕಾಂಗ್ರೆಸ್​​ ವಿರುದ್ಧವಾಗಿ ಆರೋಪ ಮಾಡ್ತಾರೆ. ಕೇಜ್ರಿವಾಲ್​ಗೆ ಯಾವ ನೈತಿಕತೆ ಇದೆ. ಜಾಹಿರಾತುಗಳಲ್ಲಿ ಕಿಕ್​ಬ್ಯಾಕ್​ ಪಡೆದಿರೋದು ಬಯಲಾಗಿದೆ. ಇಡಿಯಿಂದ ಚಾರ್ಜ್​ಶೀಟ್ ಕೂಡ ಮಾಡಲಾಗಿದೆ ಎಂದು ಅಜಯ್‌ ಮಾಕೆನ್‌ ಹೇಳಿದ್ದರು.

Related Video