
News Hour ಬೊಮ್ಮಾಯಿ ಸರ್ಕಾರದ ಸರ್ವೇ ರಿಪೋರ್ಟ್, ಹೈಕಮಾಂಡ್ನಿಂದ ಬಂತು ಖಡಕ್ ಸೂಚನೆ!
- ಬೊಮ್ಮಾಯಿ ಸಂಪುಟ ಪುನಾರಚನೆಗೆ ಹೈಕಮಾಂಡ್ ಒಲವು, ಹಾಲಿ ಸಚಿವರಲ್ಲಿ ತಳಮಳ!
- ನೇಮಕಾತಿ ಅಕ್ರಮ ಕುರಿತು ಕಾಂಗ್ರೆಸ್ ಆಡಳಿತದಲ್ಲಿ ದಾಖಲಾಗಿತ್ತು ದೂರು
- ಅಶ್ವತ್ ನಾರಾಯಣ್ ವಿರುದ್ಧ ಷಡ್ಯಂತ್ರ, ಹೌದು ಎನ್ನುತ್ತಿದೆ ಕಾಂಗ್ರೆಸ್ ಜೆಡಿಎಸ್
ಕಳೆದ 9 ತಿಂಗಳಿನಿಂದ ಮುಖ್ಮಮಂತ್ರಿಯಾಗಿ ಆಡಳಿತ ನಡೆಸುತ್ತಿರುವ ಸಿಎಂ ಬೊಮ್ಮಾಯಿ ಬದಲಾವಣೆ ಮಾತುಗಳು ಕೇಳಿಬರುತ್ತಿದೆ. ಇದರ ನಡುವೆ ಬಿಜೆಪಿ ಹೈಕಮಾಂಡ್ ಸಮೀಕ್ಷೆ ನಡೆಸಿ ವರದಿ ತರಿಸಿಕೊಂಡಿದೆ. ಬೊಮ್ಮಾಯಿ ಸರ್ಕಾರದ ಸಂಪುಟ ಪುನಾರಚನೆ, ವಿಸ್ತರಣೆ ಮಾತುಗಳು ಇಂದು ನಿನ್ನೆಯದಲ್ಲ. ಸಿಎಂ ದೆಹಲಿ ಬೇಟಿ, ರಾಷ್ಟ್ರನಾಯಕರ ಕರ್ನಾಟಕ ಭೇಟಿ ವೇಳೆ ಇದೇ ಮಾತುಗಳು ಕೇಳಿಬರುತ್ತಿದೆ. ಆದರೆ ಸರ್ವೆ ವರದಿ ತರಿಸಿಕೊಂಡಿರುವ ಕೇಂದ್ರ ಬಿಜೆಪಿ, ಸಣ್ಣ ಮಟ್ಟದಲ್ಲಿ ಸಂಪುಟ ಸರ್ಜರಿ ನಡೆಸಲು ಮುಂದಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ