
UP Elections: ಯೋಗಿ, ಅಖಿಲೇಶ್ ಯಾರಿಗೆ ಯುಪಿ ಉಪ್ಪರಿಗೆ?
ಕಾಶೀ, ಪೂರ್ವಾಂಚಲ, ಅಯೋಧ್ಯೆ, ಗೋರಖ್ಪುರ ಇಲ್ಲೆಲ್ಲೂ ಒಂದೇ ಟ್ರೆಂಡ್ ಇಲ್ಲ. ನಾಲ್ನೂರ ಮೂರು ಕ್ಷೇತ್ರ, ನೂರಾರು ಲೆಕ್ಕ, ಒಂದೊಂದು ಕ್ಷೇತ್ರವೂ ವಿಭಿನ್ನ. ಯಾರಾಗ್ತಾರೆ ಬಹದ್ದೂರ್?
ಲಕ್ನೋ(ಜ.18): ಕಾಶೀ, ಪೂರ್ವಾಂಚಲ, ಅಯೋಧ್ಯೆ, ಗೋರಖ್ಪುರ ಇಲ್ಲೆಲ್ಲೂ ಒಂದೇ ಟ್ರೆಂಡ್ ಇಲ್ಲ. ನಾಲ್ನೂರ ಮೂರು ಕ್ಷೇತ್ರ, ನೂರಾರು ಲೆಕ್ಕ, ಒಂದೊಂದು ಕ್ಷೇತ್ರವೂ ವಿಭಿನ್ನ. ಯಾರಾಗ್ತಾರೆ ಬಹದ್ದೂರ್?
Add Asianetnews Kannada as a Preferred Source

ಇಡೀ ದೇಶದಲ್ಲಿ ಬೇರೆಲ್ಲಾ ಚುನಾವಣೆಗಳಿಗಿಂತ ಹೆಚ್ಚು ಗಮನ ಸೆಳೆಯೋದು ಅಂದ್ರೆ ಉತ್ತರ ಪ್ರದೆಶ ಚುನಾವಣೆ. ಇದು ಇಡೀ ದೇಶದ ಚುನಾವಣೆಗೆ ಒಂದು ದಿಕ್ಸೂಚಿ ಅನ್ನೋದು ರಾಜಕೀಯ ತಜ್ಞರು ಹೇಳುತ್ತಾರೆ. ಭಾರತದಲ್ಲಿ ಬೇರೆಲ್ಲಾ ರಾಜ್ಯಗಳಲ್ಲಿರೋ ವಿಧಾನಸಭಾ ಕ್ಷೇತ್ರಗಳಿಗಿಂತ ಅತೀ ಹೆಚ್ಚು ಕ್ಷೇತ್ರಗಳನ್ನು ಹೊಂದಿರೋ ಈ ರಾಜ್ಯ ಎಲ್ಲಾ ಪಕ್ಷಗಳಿಗೂ ಪ್ರತಿಷ್ಠೆಯ ಕಣ. ಆದರೆ ಉತ್ತರ ಪ್ರದೆಶದ ಗದ್ದುಗೆ ಹಿಡಿಯೋದೇನೂ ಸುಲಭವಲ್ಲ. ಹೀಗಿರುವಾಗ ಈ ಸವಾಲನ್ನೆದುರಿಸಿ ಗೆಲ್ಲೋರು ಯಾರು?