Asianet Suvarna News Asianet Suvarna News

ರಾಮಮಂದಿರ ವಿರೋಧಿಸಿದವರಿಂದಲೂ ರಾಮಲಲ್ಲಾ ದರ್ಶನ: ಕುಟುಂಬದೊಂದಿಗೆ ಅಯೋಧ್ಯೆಗೆ ಬಂದ ದೆಹಲಿ ಸಿಎಂ !

ರಾಮಮಂದಿರ ಕಟ್ಟುವುದನ್ನು ವಿರೋಧಿಸಿದ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ರಾಮಲಲ್ಲಾನ ದರ್ಶನ ಪಡೆದಿದ್ದಾರೆ.
 

ರಾಮಮಂದಿರ ಕಟ್ಟುವುದನ್ನು ವಿರೋಧಿಸಿದ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌(Arvind Kejriwal) ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ಅಯೋಧ್ಯೆಯತ್ತ(Ayodhya) ರಾಜಕೀಯ ನಾಯಕರು ಮುಖಮಾಡುತ್ತಿದ್ದಾರೆ. ಕುಟುಂಬ ಸಮೇತ ರಾಮಲಲ್ಲಾ(Ram Lalla) ದರ್ಶನವನ್ನು ಅರವಿಂದ್ ಕೇಜ್ರಿವಾಲ್ ಪಡೆದಿದ್ದಾರೆ. ಅರವಿಂದ್ ಕೇಜ್ರಿವಾಲ್ ಜೊತೆ ಅವರ ಪತ್ನಿ, ತಾಯಿ ಆಗಮಿಸಿದ್ದು, ರಾಮಲಲ್ಲಾ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಕೇಜ್ರಿವಾಲ್‌ಗೆ ಪಂಜಾಬ್ ಸಿಎಂ ಭಗವಂತ್ ಮಾನ್ ಸಾಥ್ ನೀಡಿದ್ದರು. ಕುಟುಂಬದ ಸದಸ್ಯರೊಂದಿಗೆ ಭಗವಂತ್ ಮಾನ್ ಬಂದಿದ್ದರು. ಒಟ್ಟಿನಲ್ಲಿ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಭಗವಾನ್ ರಾಮನ ದರ್ಶನ ಪಡೆದಿದ್ದಾರೆ.

ಇದನ್ನೂ ವೀಕ್ಷಿಸಿ:  Sonia Gandhi: ರಾಜ್ಯಸಭೆಗೆ ಸ್ಪರ್ಧೆ ಮಾಡ್ತಾರಾ ಸೋನಿಯಾ ಗಾಂಧಿ ? ಚುನಾವಣೆಗೆ ಕಣಕ್ಕಿಳಿಸಲು ಸಭೆಯಲ್ಲಿ ನಿರ್ಧಾರ..?