Asianet Suvarna News Asianet Suvarna News

ವಿಶ್ವದ ಮಾಹಿತಿ ತಂತ್ರಜ್ಞಾನ ದಿಗ್ಗಜ ಇನ್ಫೋಸಿಸ್‌ಗೆ ಅಮೃತ ಮಹೋತ್ಸವ ಯಾತ್ರೆ

ವಿಶ್ವದ ಮಾಹಿತಿ ತಂತ್ರಜ್ಞಾನದ ದಿಗ್ಗಜ ಇನ್ಫೋಸಿಸ್‌ಗೆ ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡ ಪ್ರಭ ಅಮೃತ ಮಹೋತ್ಸವ ಯಾತ್ರೆ ಭೇಟಿ ನೀಡಿದೆ. ಈ ಭೇಟಿಯ ಹೈಲೈಟ್ಸ್ ಇಲ್ಲಿದೆ.

ಭಾರತದ ಸ್ವಾತಂತ್ರ್ಯದ 75 ವರ್ಷದ ಸಂಭ್ರವನ್ನು ಮತ್ತಷ್ಟು ಅರ್ಥಪೂರ್ಣವಾಗಿ ಆಚರಿಸಲು ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭ ಅಮೃತ ಮಹೋತ್ಸವ ಯಾತ್ರೆ ಆರಂಭಿಸಿದೆ. ಇದೀಗ ಈ ಯಾತ್ರೆ ವಿಶ್ವದ ಮಾಹಿತಿ ತಂತ್ರಜ್ಞಾನದ ದಿಗ್ಗಜ ಇನ್ಫೋಸಿಸ್‌ಗೆ ಭೇಟಿ ನೀಡಿದೆ. ಎನ್‌ಸಿಸಿ ಕೆಡೆಟ್‌ ತಂಡ ಬೆಂಗಳೂರಿನ ಇನ್ಫೋಸಿಸ್ ಕೇಂದ್ರ ಕಚೇರಿಗೆ ಭೇಟಿ ನೀಡಿತು. ಈ ವೇಳೆ ಎನ್‌ಸಿಡಿ ಕೆಡೆಟ್‌ಗಳಲ್ಲಿ ಇನ್ಫೋಸಿಸ್ ಕ್ಯಾಂಪಸ್ ಸುತ್ತಾಡಿಸಿ ಪ್ರತಿಯೊಂದು ಮಾಹಿತಿ ನೀಡಲಾಯಿತು. ಈ ವೇಳೆ ಎನ್‌ಸಿಸಿ ಕೆಡೆಟ್‌ಗಳ ಹಲವು ಪ್ರಶ್ನೆಗಳಿಗೆ ಇನ್ಫೋಸಿಸ್ ಕೇಂದ್ರದ ಮುಖ್ಯಸ್ಥರು, ಅಧಿಕಾರಿಗಳು ಉತ್ತರ ನೀಡಿದರು. ಈ ಮೂಲಕ ನಮ್ಮ ಅಮೃತ ಮಹೋತ್ಸವದ ಇಂದಿನ ಯಾತ್ರೆ ಅಂತ್ಯಗೊಂಡಿತು.
 

Video Top Stories