
ವೈಕುಂಠ ಏಕಾದಶಿ: ದೇಗುಲಗಳಿಗೆ ತೆರಳಲು ಆಗದಿದ್ರೆ ಏನು ಮಾಡಬೇಕು?
ವೈಕುಂಠ ಏಕಾದಶಿಯಂದು ಉತ್ತರ ದ್ವಾರದಿಂದ ವಿಷ್ಣುವಿನ ದರ್ಶನ ಮಾಡಿದ್ರೆ ಸ್ವರ್ಗ ಪ್ರಾಪ್ತಿ ಎಂಬ ನಂಬಿಕೆ ಇದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೊಸ ವರ್ಷದ ಆರಂಭದಲ್ಲೇ ವೈಕುಂಠ ಏಕಾದಶಿ ಸಂಭ್ರಮ ಬಂದಿದ್ದು, ಏಕಾದಶಿ ದಿನ ನಾಡಿನಾದ್ಯಂತ ಭಕ್ತರಿಂದ ವಿಷ್ಣು ನಾಮಸ್ಮರಣೆ ಮಾಡಲಾಗುತ್ತದೆ. ಮನೆಯಲ್ಲಿ ಭವಂತನ ಪ್ರಾರ್ಥನೆ ಮಾಡಿದರೆ ಸಾಕು ಎಂದು ಹೇಳಲಾಗುತ್ತದೆ. ಭಗಂವತನ ಫೋಟೋಗೆ ಒಂದು ತುಳಸಿ ಹಾರವನ್ನು ಹಾಕಿ ನಮಸ್ಕಾರವನ್ನು ಮಾಡಿ. ತುಳಸಿ ತುಂಬ ಶ್ರೇಷ್ಠವಾಗಿದ್ದು, ಸಾಕ್ಷಾತ್ ಲಕ್ಷ್ಮಿಯೇ ಆಗಿದ್ದಾಳೆ. ತುಳಸಿಯನ್ನು ಭಕ್ತಿ ಪೂರ್ವಕದಿಂದ ಹಾಕಿದರೆ ವಿಷ್ಣು ತೃಪ್ತನಾಗುತ್ತಾನೆ. ಭಯ ಇಟ್ಟುಕೊಳ್ಳಬೇಡಿ, ಭಕ್ತಿ ಇಟ್ಟುಕೊಳ್ಳಿ. ಶ್ರದ್ಧೆ ಇಟ್ಟುಕೊಳ್ಳಿ, ಆಚರಣೆ ಇಟ್ಟುಕೊಳ್ಳಿ. ಆದ್ರೆ ಆಡಂಬರ ಇಟ್ಟುಕೊಳ್ಳಬೇಡಿ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ