Mahalaya Amavasya: ಅಜ್ಜ, ಮುತ್ತಜ್ಜ, ಬಂಧುಬಳಗ, ಸ್ನೇಹಿತ, ನಾಯಿ.. ಅಗಲಿದವರಿಗೆಲ್ಲ ಮಾಡಿ ಶ್ರಾದ್ಧ!
ಮಹಾಲಯ ಅಮಾವಾಸ್ಯೆಯಲ್ಲಿ ಯಾರಿಗೆಲ್ಲ ಪಿಂಡ ಪ್ರದಾನ ಮಾಡಬೇಕು?
ಶ್ರಾದ್ಧದಲ್ಲಿ ಅನೇಕ ಬಗೆಗಳಿವೆ.. ನಿತ್ಯ ಶ್ರಾದ್ಧ, ಗೋಷ್ಠಿ ಶ್ರಾದ್ಧ, ವೃದ್ಧಿ ಶ್ರಾದ್ಧ ಇತ್ಯಾದಿ ಇತ್ಯಾದಿ.. ಹಲವು ಬಗೆಗಳಲ್ಲಿ ಶ್ರಾದ್ಧ ಮಾಡಲು ಅವಕಾಶವಿದೆ. ಆದರೆ, ಇಷ್ಟೆಲ್ಲ ಶ್ರಾದ್ಧಗಳನ್ನು ಸದಾ ಮಾಡಲು ಸಾಧ್ಯವಿಲ್ಲವೆಂದೇ ಮಹಾಲಯ ಅಮಾವಾಸ್ಯೆಯಂದು ಶ್ರಾದ್ಧ ಮಾಡಲು ಹೇಳಲಾಗುತ್ತದೆ. ಹೀಗೆ ಶ್ರಾದ್ಧ ಮಾಡುವಾಗ ಯಾರಿಗೆಲ್ಲ ಮಾಡಬೇಕು ಎಂಬ ಪ್ರಶ್ನೆ ಏಳುವುದು ಸಹಜ.. ಮಹಾಲಯ ಅಮಾವಾಸ್ಯೆಯಲ್ಲಿ ಶ್ರಾದ್ಧ ಮಾಡುವಾಗ ಕೇವಲ 3 ತಲೆಮಾರುಗಳಿಗಲ್ಲ.. ಅಗಲಿದ ಬಂಧುಬಳಗಕ್ಕೆಲ್ಲ ಶ್ರಾದ್ಧ ಮಾಡಬೇಕು ಎನ್ನುತ್ತಾರೆ ಶಾಸ್ತ್ರಿಗಳು. ಈ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳೋಕೆ ವಿಡಿಯೋ ನೋಡಿ..