
Deepavali: ಪಿತೃಗಳ ಆರಾಧನೆ, ಬಲೀಂದ್ರನನ್ನು ಕರೆಯುವ ಪದ್ಧತಿ: ತುಳು ಜನಪದರ ವಿಶಿಷ್ಟ ದೀಪಾವಳಿ
ದೇಶಾದ್ಯಂತ ಜನ ಸಡಗರ, ಸಂಭ್ರಮದಿಂದ ಆಚರಿಸುವ ಹಬ್ಬ ದೀಪಾವಳಿ. ನಮ್ಮನ್ನ ಕತ್ತಲಿನಿಂದ, ಬೆಳಕಿನೆಡೆಗೆ ಕರೆದೊಯ್ಯುವ ಹಬ್ಬ. ದೀಪಾವಳಿ ಆಚರಣೆ ಒಂದೊಂದು ಭಾಗದಲ್ಲಿ ಒಂದೊಂದು ರೀತಿ ಇದೆ. ದೀಪಾವಳಿ ಸಂದರ್ಭದಲ್ಲಿ ತುಳು ಜನಪದರು ತಮ್ಮ ಪಿತೃಗಳನ್ನು ನೆನೆಯುತ್ತಾರೆ.
ಉಡುಪಿ (ನ. 07): ದೇಶಾದ್ಯಂತ ಜನ ಸಡಗರ, ಸಂಭ್ರಮದಿಂದ ಆಚರಿಸುವ ಹಬ್ಬ ದೀಪಾವಳಿ. (Deepavali) ನಮ್ಮನ್ನ ಕತ್ತಲಿನಿಂದ, ಬೆಳಕಿನೆಡೆಗೆ ಕರೆದೊಯ್ಯುವ ಹಬ್ಬ. ದೀಪಾವಳಿ ಆಚರಣೆ ಒಂದೊಂದು ಭಾಗದಲ್ಲಿ ಒಂದೊಂದು ರೀತಿ ಇದೆ. ದೀಪಾವಳಿ ಸಂದರ್ಭದಲ್ಲಿ ತುಳು (Tulu Karnataka) ಜನಪದರು ತಮ್ಮ ಪಿತೃಗಳನ್ನು ನೆನೆಯುತ್ತಾರೆ.
Add Asianetnews Kannada as a Preferred Source

ದೀಪಾವಳಿಯಂದು ಬಲೀಂದ್ರನನ್ನು ಯಾಕಾಗಿ ಸ್ವಾಗತಿಸಲಾಗುತ್ತದೆ..? ಏನಿದರ ಮಹತ್ವ.?
ಹಿರಿಯ ಮೂರ್ನಾಲ್ಕು ತಲೆ ಮಾರುಗಳ ಪಿತೃಗಳನ್ನು ಸ್ಮರಿಸಿ, ಅವರಿಗೆ ಊಟ ಬಡಿಸಿಟ್ಟು, ಅವರ ನೆಚ್ಚಿನ ಉಡುಗೆಯನ್ನು ತಂದಿಡುತ್ತಾರೆ. ಇನ್ನು ಬಲೀಂಧ್ರ (Balindra) ಪೂಜೆ ಬಹಳ ವಿಶೇಷ. ಮನೆಯ ಗಂಡಸರೆಲ್ಲಾ ಗದ್ದೆಗೆ ಹೋಗಿ ದೀಪ ಹಚ್ಚಿಟ್ಟು ಬಲೀಂಧ್ರನನ್ನು ಕರೆಯುವುದು ಪದ್ಧತಿ. ಬಲೀಂದ್ರ ಚಕ್ರವರ್ತಿ ತುಳುನಾಡನ್ನು (Coastal Karnataka) ಆಳುತ್ತಿದ್ದ ಎಂಬ ನಂಬಿಕೆ ಇದೆ. ತುಳು ನಾಡಿನ ದೀಪಾವಳಿ ಆಚರಣೆ, ಪದ್ಧತಿ ಹೇಗಿರುತ್ತದೆ..? ಇಲ್ಲಿದೆ ಪ್ರಾತ್ಯಕ್ಷಿಕೆ.