Asianet Suvarna News Asianet Suvarna News

ಬೆಂಗಳೂರಿನಲ್ಲಿ ಕಣ್ತುಂಬಿಕೊಳ್ಳಿ ತಿರುಪತಿ ದೇವಾಲಯದ ಪ್ರತಿರೂಪ ರಾಜಾಧಿರಾಜ ಗೋವಿಂದ ಮಂದಿರ

ಬೆಂಗಳೂರಿನ ಕನಕಪುರ ರಸ್ತೆಯ ವಸಂತಪುರದಲ್ಲಿ ಇಸ್ಕಾನ್  ಶ್ರೀ ರಾಜಾಧಿರಾಜ ಗೋವಿಂದ ಮಂದಿರವನ್ನು 150 ಕೋಟಿ ವೆಚ್ಚದಲ್ಲಿ ನಿರ್ಮಿಸಿದೆ. ಇದನ್ನು ಕಣ್ತುಂಬಿಕೊಳ್ಳೋಣ ಬನ್ನಿ. 

ಬೆಂಗಳೂರಿನ ಕನಕಪುರ ರಸ್ತೆಯ ವಸಂತಪುರದಲ್ಲಿ ಇಸ್ಕಾನ್  ಶ್ರೀ ರಾಜಾಧಿರಾಜ ಗೋವಿಂದ ಮಂದಿರವನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸಿದೆ. ಈ ದೇವಾಲಯವು ತಿರುಪತಿ ತಿಮ್ಮಪ್ಪನ ಸನ್ನಿಧಾನದ ಪ್ರತಿರೂಪವನ್ನೇ ಹೊತ್ತಿರುವುದು ವಿಶೇಷ. ಇಲ್ಲಿಗೆ ಜುಲೈ 31ರಿಂದ ಭಕ್ತರ ಭೇಟಿಗೆ ಅವಕಾಶ ಮಾಡಿಕೊಡಲಾಗುತ್ತದೆ. 28 ಎಕರೆ ಪ್ರದೇಶದಲ್ಲಿ 150 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯವು ಕಣ್ಣಿಗೆ ಹಬ್ಬ, ಮನಸ್ಸಿಗೆ ತಂಪು ನೀಡುವುದರಲ್ಲಿ ಸಂಶಯವಿಲ್ಲ. 

ಮುತ್ತನ್ನು ಈ ಆರು ರತ್ನಗಳೊಂದಿಗೆ ಧರಿಸಿದರೆ ಅಪಾಯ ತಪ್ಪಿದ್ದಲ್ಲ!

ಈ ದೇವಸ್ಥಾನದಲ್ಲಿ ಸಾಕಷ್ಟು ವಿಶೇಷತೆಗಳಿವೆ, ಕಣ್ಮನ ಸೆಳೆವ ಬಹಳಷ್ಟು ವೈಭೋಗಗಳಿವೆ. ಅವೇನು, ದೇವಾಲಯ ನೋಡಲು ಹೇಗಿದೆ ತಿಳಿಯಲು ಈ ವಿಡಿಯೋ ನೋಡಿ. 

Video Top Stories