ಶಿವಣ್ಣ ಬಂದ್ರೆ ನಾ ಬರಲ್ಲ.. ಹೀಗ್ಯಾಕಂದ್ರು ರವಿಮಾಮ?: ಸೂತ್ರಧಾರಿ ಇವೆಂಟ್​ನಲ್ಲಿ ಆಗಿದ್ದೇನು?

ಇತ್ತೀಚಿಗೆ ಸೂತ್ರಧಾರಿ ಸಿನಿಮಾ ವೇದಿಕೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಸೆಂಚೂರಿ ಸ್ಟಾರ್ ಶಿವರಾಜ್​ಕುಮಾರ್ ಮುಖಾಮುಖಿ ಆಗಿದ್ರು. ಶಿವಣ್ಣ ಈ ಕಾರ್ಯಕ್ರಮಕ್ಕೆ ಬರ್ತಾರೆ ಅಂತ ರವಿಚಂದ್ರನ್​ಗೆ ಗೊತ್ತೇ ಇರಲಿಲ್ಲ.

Share this Video
  • FB
  • Linkdin
  • Whatsapp

ಇತ್ತೀಚಿಗೆ ಸೂತ್ರಧಾರಿ ಸಿನಿಮಾ ವೇದಿಕೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಸೆಂಚೂರಿ ಸ್ಟಾರ್ ಶಿವರಾಜ್​ಕುಮಾರ್ ಮುಖಾಮುಖಿ ಆಗಿದ್ರು. ಶಿವಣ್ಣ ಈ ಕಾರ್ಯಕ್ರಮಕ್ಕೆ ಬರ್ತಾರೆ ಅಂತ ರವಿಚಂದ್ರನ್​ಗೆ ಗೊತ್ತೇ ಇರಲಿಲ್ಲ. ಶಿವಣ್ಣನನ್ನ ವೇದಿಕೆ ಮೇಲೆ ನೋಡಿದ ರವಿಮಾಮ, ಶಿವಣ್ಣ ಬರೋದು ನಾನು ಗೊತ್ತಿದ್ದಿದ್ರೆ ನಾನು ಬರ್ತಾನೇ ಇರಲಿಲ್ಲ ಅಂದುಬಿಟ್ರು. ಅರೇ ಕ್ರೇಜಿಸ್ಟಾರ್ ಯಾಕೆ ಈ ಮಾತು ಹೇಳಿದ್ರು..? ಅದರ ಹಿಂದೆ ಒಂದು ಇನ್​ಟ್ರೆಸ್ಟಿಂಗ್ ವಿಷ್ಯ ಇದೆ.. ಏನದು ವಿಷ್ಯ ಈ ಸ್ಟೋರಿ ನೋಡಿ. ಕ್ರೇಜಿಸ್ಟಾರ್ ರವಿಚಂದ್ರನ್ & ಸೆಂಚ್ಯೂರಿ ಸ್ಟಾರ್ ಶಿವರಾಜ್​ಕುಮಾರ್ .. ಸ್ಯಾಂಡಲ್​ವುಡ್​ನ ಇಬ್ಬರು ದಿಗ್ಗಜರು. 1980ರ ದಶಕದಿಂದಲೂ ಕನ್ನಡ ಸಿನಿರಂಗವನ್ನ ಆಳ್ತಾ ಬಂದಿರೋ ತಾರೆಯರು. ಈ ಇಬ್ಬರೂ ಇತ್ತೀಚಿಗೆ ಚಂದನ್ ಶೆಟ್ಟಿ ನಟನೆಯ ಸೂತ್ರಧಾರಿ ಸಿನಿಮಾದ ಪ್ರೀ ರಿಲೀಸ್ ಇವೆಂಟ್​​ನಲ್ಲಿ ಮುಖಾಮುಖಿ ಆಗಿದ್ರು. 

ಬಹುದಿನಗಳ ಬಳಿಕ ಈ ಇಬ್ಬರೂ ದಿಗ್ಗಜರು ವೇದಿಕೆ ಮೇಲೆ ಮುಖಾಮುಖಿ ಆಗಿದ್ರು. ಆದ್ರೆ ಈ ಸಮಯದಲ್ಲಿ ಕ್ರೇಜಿಸ್ಟಾರ್ ಒಂದು ಅಚ್ಚರಿಯ ಮಾತನ್ನ ಹೇಳಿದ್ರು. ಶಿವಣ್ಣ ಬರ್ತಾರೆ ಅಂದ್ರೆ ಗೊತ್ತಿದ್ರೆ ನಾನು ಬರ್ತಾನೆ ಇರಲಿಲ್ಲ ಅಂತ. ಅರೇ ರವಿಮಾಮ ಯಾಕೆ ಈ ಮಾತು ಹೇಳಿದ್ರು ಅಂತ ಅಚ್ಚರಿ ಪಡ್ತಾ ಇದೀರಾ. ಹಾಗಾದ್ರೆ ಅವರ ಮಾತು ಪೂರ್ತಿ ಕೇಳಿ. ಶಿವಣ್ಣ ಬಂದ್ರೆ ನಾನು ಬಂದಂತೆ.. ನಾನು ಬಂದ್ರೆ ಶಿವಣ್ಣ ಬಂದಂತೆ.. ಸೋ ನಾವಿಬ್ರೂ ಒಂದೇ ವೇದಿಕೆ ಹಂಚಿಕೊಳ್ಳಲ್ಲ ಅಂದಿದ್ದಾರೆ ರವಿಮಾಮ. ಹೌದು ರವಿಚಂದ್ರನ್ ಮತ್ತು ಶಿವರಾಜ್​ಕುಮಾರ್ ಫ್ಯಾಮಿಲಿ ನಡುವಿನ ಸಂಬಂಧ ಅಷ್ಟು ಹಳೆಯದ್ದು ಮತ್ತು ಅಷ್ಟೇ ಗಟ್ಟಿಯಾದದ್ದು. ಅಸಲಿಗೆ ಶಿವಣ್ಣ-ರವಿಚಂದ್ರನ್ ಚಿಕ್ಕವಯಸ್ಸಿದಂಲೇ ಸ್ನೇಹಿತರು. 

Related Video