ಕರಾವಳಿಯಲ್ಲಿ ಕಾಂತಾರ ಚಾಪ್ಟರ್-1 ವಿರುದ್ಧ ಹೊಸ ವಿವಾದ ಎದ್ದಿದೆ. ದೈವಗಳ ಅವಹೇಳನ ಮತ್ತು ಅತಿರೇಕದ ವರ್ತನೆ ಕುರಿತು ದೈವಾರಾಧಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ದೈವ ಹೇಳಿದ್ದಾ, ದೈವ ನರ್ತಕ ಹೇಳಿದ್ದಾ?” ಎಂಬ ವ್ಯಂಗ್ಯ, ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯಕ್ಕೆ ಕಾರಣವಾಗಿದೆ. ದೈವ ನುಡಿಯ ವಿರುದ್ಧ ಕಾಂತಾರ ಡೈಲಾಗ್ ಬಳಸಿದ ಆರೋಪಗಳು ಕೇಳಿಬಂದಿದ್ದು, ಕೆಲವು ದೈವಾರಾಧಕರು ಚಿತ್ರತಂಡದ ಮೌನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
