Asianet Suvarna News Asianet Suvarna News

Gadag: ಶಾಲಾ ಛಾವಣಿ ಕುಸಿಯುವ ಭೀತಿ: ಸ್ವಲ್ಪ ಯಾಮಾರಿದ್ರೂ ಮಕ್ಕಳ ಜೀವಕ್ಕೆ ಕುತ್ತು

*  ಗದಗ ನಗರದ ಎಸ್‌.ಎಂ. ಭೂಮರೆಡ್ಡಿ ಸರ್ಕಾರಿ ಶಾಲೆಯಲ್ಲಿ ನಡೆದ ಘಟನೆ
*  ಬಿಸಿಲು, ಮಳೆ ಲೆಕ್ಕಿಸದೆ ಅಂಗಳದಲ್ಲೇ ಪಾಠ ಕೇಳುತ್ತಿರುವ ಮಕ್ಕಳು 
*  ಇದರ ಬಗ್ಗೆ ಮಾಹಿತಿ ಕೊಟ್ಟಿದ್ರೂ ಇತ್ತ ಕಡೆ ತಲೆಹಾಕಿ ನೋಡ ಅಧಿಕಾರಿಗಳು

ಗದಗ(ನ.28):  ಮಳೆಯ ಕಾಟಕ್ಕೆ ವಿದ್ಯಾರ್ಥಿಗಳು ಸುಸ್ತಾಗಿದ್ದಾರೆ. ಹೌದು, ಶಾಲಾ ಛಾಬಣಿ ಕುಸಿಯುವ ಭೀತಿಯಿಂದಾಗಿ ಅಂಗಳದಲ್ಲೇ ಪಾಠ ಮಾಡುತ್ತಿರುವಂತ ಘಟನೆ ಗದಗ ನಗರದ ಎಸ್‌.ಎಂ. ಭೂಮರೆಡ್ಡಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಸ್ವಲ್ಪ ಯಾಮಾರಿದ್ರೂ ಈ ಶಾಲೆಯ ಮಕ್ಕಳ ಜೀವಕ್ಕೆ ಕುತ್ತು ಬರಲಿದೆ. ಬಿಸಿಲು, ಮಳೆ ಲೆಕ್ಕಿಸದೆ ಮಕ್ಕಳು ಅಂಗಳದಲ್ಲೇ ಪಾಠ ಕೇಳುತ್ತಿದ್ದಾರೆ. ಇದರ ಬಗ್ಗೆ ಮಾಹಿತಿ ಕೊಟ್ಟಿದ್ರೂ ಅಧಿಕಾರಿಗಳು ಮಾತ್ರ ಇತ್ತ ಕಡೆ ತಲೆಹಾಕಿ ನೋಡಿಲ್ಲ ಅನ್ನೋದು ಸ್ಥಳೀಯರ ಆರೋಪವಾಗಿದೆ.

Chamarajanagar: ಕೊಚ್ಚಿ ಹೋದ ಸೇತುವೆ, ಶಾಲಾ-ಮಕ್ಕಳ ಪರದಾಟ

ಇದರಿಂದಾಗಿ ಶಿಕ್ಷಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಮಕ್ಕಳನ್ನ ಶಾಲೆಯ ಒಳಗಡೆ ಬಿಡದೆ ಅಂಗಳದಲ್ಲೇ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಈ ಬಗ್ಗೆ ಮಕ್ಕಳು ಹಾಗೂ ಶಿಕ್ಷಕರು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಬಳಿ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ. 

Video Top Stories