Haveri: ಅಕ್ರಮ ದಾಸೋಹಕ್ಕೆ ಕಳಪೆ ಆಹಾರ ಪೂರೈಕೆ ಪ್ರಕರಣ: ಎಚ್ಚೆತ್ತ ಸರ್ಕಾರ

*  ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವರದಿ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ
*  ಶಾಲೆಗಳಿಂದ ವರದಿ ಕೇಳಿದ ಹಾವೇರಿ ಜಿಲ್ಲಾ ಪಂಚಾಯತ್‌ ಸಿಇಓ
*  ಬಂಕಾಪುರ ಶಾಲೆಗೆ ಭೇಟಿ ಪರಿಶೀಲಿಸಿ ವರದಿ ನೀಡುವಂತೆ ಆದೇಶ  

Share this Video
  • FB
  • Linkdin
  • Whatsapp

ಹಾವೇರಿ(ಫೆ.06): ಅಕ್ರಮ ದಾಸೋಹಕ್ಕೆ ಕಳಪೆ ಆಹಾರ ಪೂರೈಕೆ ಪ್ರಕರಣದ ಸುದ್ದಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಬಿತ್ತರವಾದ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಹಾವೇರಿ ಜಿಲ್ಲಾ ಪಂಚಾಯತ್‌ ಸಿಇಓ ಮಹಮದ್‌ ರೋಷನ್‌ ಶಾಲೆಗಳಿಂದ ವರದಿಯನ್ನ ಕೇಳಿದ್ದಾರೆ. ಉತ್ತಮ ಗುಣಮಟ್ಟದ ಆಹಾರ ನೀಡಲು ಸಿಇಓ ಸೂಚನೆ ಕೊಟ್ಟಿದ್ದಾರೆ. ಬಂಕಾಪುರ ಶಾಲೆಗೆ ಭೇಟಿ ಪರಿಶೀಲಿಸಿ ವರದಿ ನೀಡುವಂತೆ ಆಹಾರ ನಾಗರಿಕ ಸರಬರಾಜು ಇಲಾಖೆ ವ್ಯವಸ್ಥಾಪಕರಿಗೆ ಆದೇಶಿಸಿದ್ದಾರೆ. ಆಹಾರ ಧಾನ್ಯಗಳು ಕಳಪೆಯಾಗಿದ್ದರೆ ಕೂಡಲೇ ಹಿಂದಿರುಗಿಸಿ, 2 ದಿನದಲ್ಲಿ ಉತ್ತಮ ಗುಣಮಟ್ಟದ ಆಹಾರ ಧಾನ್ಯ ಪೂರೈಸಬೇಕು ಅಂತ ಅಧಿಕಾರಿಗಳಿಗೆ ಖಡಕ್‌ ವಾರ್ನಿಂಗ್‌ ಮಾಡಿದ್ದಾರೆ. 

Bengaluru: ಅಕ್ರಮ ಚಟುವಟಿಕೆಗಳಿಗೆ ಖಾಕಿ ಕಡಿವಾಣ: 700 ಕ್ಕೂ ಹೆಚ್ಚು ರೌಡಿಗಳು ಜೈಲು ಪಾಲು

Related Video