Asianet Suvarna News Asianet Suvarna News

ಈ ವಿದ್ಯಾರ್ಥಿಗೆ MBBS ಮಾಡುವ ಆಸೆ ; ವೈದ್ಯನಾಗುವ ಕನಸಿಗೆ ಬೇಕಾಗಿದೆ ನೆರವಿನ ಹಸ್ತ

ಕೊಪ್ಪಳ ತಾ. ಬೇಳೂರ್ ಗ್ರಾಮದ ಸಂಜೀವ್ ಕುಮಾರ್ ಎನ್ನುವ ವಿದ್ಯಾರ್ಥಿ ಎಂಬಿಬಿಎಸ್ ಮಾಡುವ ಕನಸು ಹೊತ್ತಿದ್ದಾನೆ. ಸೀಟು ಕೂಡಾ ಸಿಕ್ಕಿದೆ. ಆದರೆ ಫೀಸ್ ಕಟ್ಟಲು ಪರದಾಡುತ್ತಿದ್ದಾನೆ. ಇಂದು 5 ಗಂಟೆಯೊಳಗೆ 50 ಸಾವಿರ ರೂ ಕಟ್ಟಿದರೆ ಸೀಟು ಖಚಿತವಾಗುತ್ತದೆ. 

ಬೆಂಗಳೂರು (ನ. 27): ಓದು, ಉತ್ತಮ ಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಯ ಕನಸಾಗಿರುತ್ತದೆ. ಕೆಲವರಿಗೆ ಅದು ಸುಲಭವಾಗಿ ಸಿಕ್ಕಿದರೆ, ಇನ್ನು ಕೆಲವರಿಗೆ ಹಣಕಾಸಿನ ಸಮಸ್ಯೆ, ಮನೆಯಲ್ಲಿ ಅನಾನುಕೂಲ ಹೀಗೆ ಏನಾದರೊಂದು ಸಮಸ್ಯೆ ಇರುತ್ತದೆ. ಹೀಗಾದಾಗ ವಿದ್ಯಾರ್ಥಿ ಕನಸು, ಕನಸಾಗಿಯೇ ಉಳಿದು ಬಿಡುತ್ತದೆ. 

ಸಂಪುಟ ಸರ್ಕಸ್‌ಗೆ ಟ್ವಿಸ್ಟ್ ; ಬಿಎಸ್‌ವೈಗೆ ಹೈಕಮಾಂಡ್‌ನಿಂದ ಬಂತು ಸ್ಪಷ್ಟ ಸಂದೇಶ

ಕೊಪ್ಪಳ ತಾ. ಬೇಳೂರ್ ಗ್ರಾಮದ ಸಂಜೀವ್ ಕುಮಾರ್ ಎನ್ನುವ ವಿದ್ಯಾರ್ಥಿ ಎಂಬಿಬಿಎಸ್ ಮಾಡುವ ಕನಸು ಹೊತ್ತಿದ್ದಾನೆ. ಸೀಟು ಕೂಡಾ ಸಿಕ್ಕಿದೆ. ಆದರೆ ಫೀಸ್ ಕಟ್ಟಲು ಪರದಾಡುತ್ತಿದ್ದಾನೆ. ಇಂದು 5 ಗಂಟೆಯೊಳಗೆ 50 ಸಾವಿರ ರೂ ಕಟ್ಟಿದರೆ ಸೀಟು ಖಚಿತವಾಗುತ್ತದೆ. ಮನೆಯಲ್ಲಿ ಬಡತನ. ಹಾಗೋ ಹೀಗೋ ಮಾಡಿ ಹಣ ಹೊಂದಿಸಿದ್ದಾರೆ. ಈಗ 50 ಸಾವಿರ ರೂ ನೆರವಿನ ಹಸ್ತ ಚಾಚುತ್ತಿದ್ದಾನೆ. ವಿದ್ಯಾರ್ಥಿಯ ಭವಿಷ್ಯ ಈ ಹಣದ ಮೇಲೆ ನಿಂತಿದೆ. ಬನ್ನಿ ನೆರವಾಗೋಣ. 

Video Top Stories