Ukraine-Russia War: ಭಾರತಕ್ಕೆ ಬರಲು ಧ್ವಜವೇ ಕಾರಣ ಎಂದ ವಿದ್ಯಾರ್ಥಿ

ಉಕ್ರೇನ್ ನಲ್ಲಿ ಸಿಲುಕಿದ್ದ MBBS  ವಿದ್ಯಾರ್ಥಿನಿ ಸುನೇಹಾ ಸುರಕ್ಷಿತವಾಗಿ ಭಾರತಕ್ಕೆ ಬಂದಿದ್ದು, ತಮ್ಮ ಚಿತ್ರದುರ್ಗ ನಗರದ ಮನೆಗೆ ತಲುಪಿದ್ದಾರೆ. 

Share this Video
  • FB
  • Linkdin
  • Whatsapp

ಚಿತ್ರದುರ್ಗ: ಉಕ್ರೇನ್ ನಲ್ಲಿ (Ukraine) ಸಿಲುಕಿದ್ದ MBBS ವಿದ್ಯಾರ್ಥಿನಿ ಸುನೇಹಾ ಸುರಕ್ಷಿತವಾಗಿ ಭಾರತಕ್ಕೆ ಬಂದಿದ್ದು, ತಮ್ಮ ಚಿತ್ರದುರ್ಗ (Chitradurga) ನಗರದ ಮನೆಗೆ ತಲುಪಿದ್ದಾರೆ. ನಾವು ಉಕ್ರೇನ್‌ ನಿಂದ ಮನೆಗೆ ಬರುತ್ತೇವೆ ಎಂದು ಅಂದುಕೊಂಡಿರಲಿಲ್ಲ. ಈಗ ಸಂತೋಷವಾಗುತ್ತಿದೆ. ಬಾಂಬ್ ಬ್ಲಾಸ್ಟ್ ಆದಾಗ ಅಲ್ಲಿ ಎಲ್ಲಿರ್ಬೇಕು ಅಂತಾನೆ ಗೊತ್ತಿರ್ಲಿಲ್ಲ. ವಿಮಾನ ನಿಲ್ದಾಣದಲ್ಲಿದ್ದಾಗ ಸಮೀಪವೇ ಬ್ಪಾಸ್ಟ್ ಆಯ್ತು. ಅಲ್ಲಿಂದ ಎಲ್ಲರೂ ಓಡ ತೊಡಗಿದೆವು. ಬಳಿಕ ನನ್ನ ಸ್ನೇಹಿತೆಯ ಸಹಾಯದಿಂದ ಎರಡು ದಿನ ಫ್ಲಾಟಲ್ಲಿ ಇದ್ವಿ, ಲೈಟ್ ಹಾಕದೆ ಕಾರನ್ನ ಡ್ರೈವ್ ಮಾಡುವ ಸ್ಥಿತಿ ಇತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

CBSE Term 1 Results 2022: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಇಂದು ಪ್ರಕಟ ಸಾಧ್ಯತೆ

ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ನಮಗೆ ಫೋನ್ ಮಾಡಿ ಪರಿಸ್ಥಿತಿಯನ್ನ ತಿಳಿದು ಸಹಾಯ ಮಾಡಿದ್ರು, ಅಲ್ಲದೇ ಅವರ ಮಗಳು, ಪಿಎ ಕೂಡಾ, ನಮಗೆ ಪ್ರತಿ ದಿನ ಕರೆ ಮಾಡಿ ನಮ್ಮ ಯೋಗಕ್ಷೇಮ ವಿಚಾರಿಸಿದ್ರು ಎಂದಿದ್ದಾರೆ. ಅವರೇ ನಮಗೆ ಧೈರ್ಯ ಹೇಳಿದ್ದು ಎಂದು ಸುನೇಹಾ ಹೇಳಿಕೆ ನೀಡಿದ್ದಾರೆ.

Related Video