
ಹುಬ್ಬಳ್ಳಿ: ಹರಿಜನ ಶಾಲಾ ಮಕ್ಕಳ ಕಣ್ಣೀರಿಗೆ ಸ್ಪಂದಿಸಿದ ಕಿಚ್ಚ!
ಹುಬ್ಬಳ್ಳಿಯ ರಾಮನಗರದ ಹರಿಜನ ಶಾಲಾ ಮಕ್ಕಳ ಸಂಕಷ್ಟಕ್ಕೆ ನಟ ಕಿಚ್ಚ ಸುದೀಪ್ ನೆರವಾಗಿದ್ದಾರೆ.
ಹುಬ್ಬಳ್ಳಿ, (ಮಾ.17): ಇಲ್ಲಿನ ರಾಮನಗರದ ಹರಿಜನ ಶಾಲಾ ಮಕ್ಕಳ ಸಂಕಷ್ಟಕ್ಕೆ ನಟ ಕಿಚ್ಚ ಸುದೀಪ್ ನೆರವಾಗಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಏಕಾಏಕಿ ಶಾಲೆ ತೆರವು ಮಾಡಿದ್ದಕ್ಕೆ ವಿದ್ಯಾರ್ಥಿಗಳ ಕಣ್ಣೀರು
ಇತ್ತೀಚಿಗೆ ಲೀಸ್ ಅವಧಿ ಮುಗಿದ ಕಾರಣ ಶಾಲಾ ಕಟ್ಟಡವನ್ನು ಖಾಲಿ ಮಾಡಿಸಲಾಗಿದೆ. ಆದ್ದರಿಂದ ಸದ್ಯ ಶಾಲೆಗೆ ರಜೆ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆ ಭೇಟಿ ನೀಡಿದ ಸುದೀಪ ಅಭಿಮಾನಿಗಳು ಮಕ್ಕಳ ಸಮಸ್ಯೆ ಆಲಿಸಿ ಶೀಘ್ರದಲ್ಲೇ ಶಾಲೆಗೆ ಬಾಡಿಗೆ ಕಟ್ಟಡ ಒದಗಿಸುವುದಾಗಿ ಭರವಸೆ ನೀಡಲಾಗಿದೆ.