ಹುಬ್ಬಳ್ಳಿ: ಹರಿಜನ ಶಾಲಾ ಮಕ್ಕಳ ಕಣ್ಣೀರಿಗೆ ಸ್ಪಂದಿಸಿದ ಕಿಚ್ಚ!
ಹುಬ್ಬಳ್ಳಿಯ ರಾಮನಗರದ ಹರಿಜನ ಶಾಲಾ ಮಕ್ಕಳ ಸಂಕಷ್ಟಕ್ಕೆ ನಟ ಕಿಚ್ಚ ಸುದೀಪ್ ನೆರವಾಗಿದ್ದಾರೆ.
ಹುಬ್ಬಳ್ಳಿ, (ಮಾ.17): ಇಲ್ಲಿನ ರಾಮನಗರದ ಹರಿಜನ ಶಾಲಾ ಮಕ್ಕಳ ಸಂಕಷ್ಟಕ್ಕೆ ನಟ ಕಿಚ್ಚ ಸುದೀಪ್ ನೆರವಾಗಿದ್ದಾರೆ.
ಏಕಾಏಕಿ ಶಾಲೆ ತೆರವು ಮಾಡಿದ್ದಕ್ಕೆ ವಿದ್ಯಾರ್ಥಿಗಳ ಕಣ್ಣೀರು
ಇತ್ತೀಚಿಗೆ ಲೀಸ್ ಅವಧಿ ಮುಗಿದ ಕಾರಣ ಶಾಲಾ ಕಟ್ಟಡವನ್ನು ಖಾಲಿ ಮಾಡಿಸಲಾಗಿದೆ. ಆದ್ದರಿಂದ ಸದ್ಯ ಶಾಲೆಗೆ ರಜೆ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆ ಭೇಟಿ ನೀಡಿದ ಸುದೀಪ ಅಭಿಮಾನಿಗಳು ಮಕ್ಕಳ ಸಮಸ್ಯೆ ಆಲಿಸಿ ಶೀಘ್ರದಲ್ಲೇ ಶಾಲೆಗೆ ಬಾಡಿಗೆ ಕಟ್ಟಡ ಒದಗಿಸುವುದಾಗಿ ಭರವಸೆ ನೀಡಲಾಗಿದೆ.