Hindu Traders ಪುತ್ತೂರು ದೇವಸ್ಥಾನದ ಜಾತ್ರೆಯಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ!
- ಮಂಗಳೂರಿನ ಬಳಿಕ ಪುತ್ತೂರಿನ ಜಾತ್ರೆಯಲ್ಲಿ ಮುಸ್ಲಿಮರಿಗೆ ಬಹಿಷ್ಕಾರ
- ಮಹಾಲಿಂಗೇಶ್ವರ ಜಾತ್ರೆಯಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರ
- ಹಿಜಾಬ್ ಗದ್ದಲದ ಬಳಿಕ ಕರಾವಳಿಯಲ್ಲಿ ಸಮುದಾಯಗಳ ಪ್ರಬಲ ನಿರ್ಧಾರ
ಪುತ್ತೂರು(ಮಾ.22): ಮಂಗಳೂರಿನ ಬಳಿಕ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕಲಾಗಿದೆ. ಎಪ್ರಿಲ್ 1 ರಿಂದ 10ರ ವರೆಗೆ ಪುತ್ತೂರು ಜಾತ್ರೋತ್ಸವ ನಡೆಯಲಿದೆ. ಈ ಜಾತ್ರೆಯಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಎಂದು ಘೋಷಿಸಲಾಗಿದೆ. ಹಿಂದೂ ವ್ಯಾಪಾರಿಗಳು ಆಧಾರ ಕಾರ್ಡ್ ಸಹಿತಿ ಹರಾಜಿನಲ್ಲಿ ಪಾಲ್ಗೊಳ್ಳಲು ಸೂಚಿಸಲಾಗಿದೆ.