Asianet Suvarna News Asianet Suvarna News

Today Horoscope: ಇಂದು ರಥಸಪ್ತಮಿ ಇದ್ದು, ಸೂರ್ಯ ದೇವನ ಪೂಜೆಯಿಂದ ಸಿಗುವ ಫಲಗಳೇನು ಗೊತ್ತಾ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಶುಕ್ರವಾರ,ಸಪ್ತಮಿ ತಿಥಿ, ಭರಣಿ ನಕ್ಷತ್ರ.

ಇಂದು ರಥಸಪ್ತಮಿ ಇದ್ದು, ಈ ದಿನ ಸೂರ್ಯ ಉತ್ತರದ ಕಡೆ ಪಯಣ ಮಾಡುತ್ತಾನೆ ಎಂದು ಹೇಳಲಾಗುತ್ತದೆ. ನಮಗೆ ಸೂರ್ಯ ಕೃಪೆಯ ಅವಶ್ಯಕವಿದೆ. ಯಾಕೆಂದರೆ ಆತ ಆರೋಗ್ಯದ ಅಧಿಪತಿಯಾಗಿದ್ದಾನೆ. ಮಾಘ ಮಾಸದಲ್ಲಿ ಸೂರ್ಯ ಪ್ರಜ್ವಲಿಸುತ್ತಿರುತ್ತಾನೆ. ಇದರಿಂದ ಆರೋಗ್ಯ ಸಮೃದ್ಧಿಯಾಗಿರುತ್ತದೆ. ಈ ದಿನ ಸೂರ್ಯ ದೇವರನ್ನು ಪೂಜಿಸುವುದು ಅನೇಕ ಪ್ರಯೋಜನಗಳನ್ನು ನೀಡುತ್ತದೆ ಮತ್ತು ಜೀವನದ ಎಲ್ಲಾ ಕಷ್ಟಗಳನ್ನು ತೆಗೆದುಹಾಕುತ್ತದೆ ಎಂದು ನಂಬಲಾಗಿದೆ. ಸೂರ್ಯನಿಗೆ ಕೆಂಪು ವರ್ಣ ತುಂಬಾ ಇಷ್ಟವಾದದ್ದು ಆಗಿದೆ.

ಇದನ್ನೂ ವೀಕ್ಷಿಸಿ:  ಎಕ್ಸಾಂ ಟೈಂನಲ್ಲಿ ಮಕ್ಕಳನ್ನು ಕಾಡೋ ಫೋಕಸಿಂಗ್ ಪ್ರಾಬ್ಲೆಮ್, ಇದಕ್ಕೇನು ಕಾರಣ?

Video Top Stories