
Today Horoscope: ಈ ರಾಶಿಯವರು ಇಂದು ಸಂಗಾತಿಯಿಂದ ದೂರವಾಗುತ್ತಾರೆ..ಖಿನ್ನತೆಯಿಂದ ಬಳಲುವಿರಿ
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಸೋಮವಾರ,ಷಷ್ಠಿ ತಿಥಿ, ಪೂರ್ವಾಷಾಢ ನಕ್ಷತ್ರ.
Add Asianetnews Kannada as a Preferred Source

ಈ ದಿನ ಷಷ್ಠಿ ತಿಥಿ ಇರುವುದಿಂದ ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ. ಗೊಬ್ಬರಿ ಮತ್ತು ಸಕ್ಕರೆಯನ್ನು ದಾನ ಮಾಡಬಹುದು. ಈ ದಿನ ಸಿಂಹ ರಾಶಿಯವರಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ತಲೆ ಭಾಗದಲ್ಲಿ ಸಮಸ್ಯೆ. ಆಹಾರ ವ್ಯತ್ಯಾಸ. ವೃತ್ತಿಯಲ್ಲಿ ಅನುಕೂಲ. ಬಂಧು-ಮಿತ್ರರ ಸಹಕಾರ. ಆದಿತ್ಯ ಹೃದಯ ಪಠಿಸಿ. ತುಲಾ ರಾಶಿಯವರಿಗೆ ಸಹೋದರರ ಸಹಕಾರ. ಸೇವಕರ ಸಹಾಯ ಸಿಗಲಿದೆ. ಸಂಗಾತಿಯಲ್ಲಿ ಸಾಮರಸ್ಯ. ವ್ಯಾಪಾರಿಗಳಿಗೆ ಅನುಕೂಲ. ಇಷ್ಟದೇವತಾರಾಧನೆ ಮಾಡಿ.
ಇದನ್ನೂ ವೀಕ್ಷಿಸಿ: ಪರಿಹಾರ ಕೊಟ್ಟಿದ್ರಿಂದ ಯಾರಿಗೆ ಲಾಭ..? ಹೇಗೆ ಲಾಭ..? ಮುಗಿಯದ ಕತೆಯಾಗಿದೆಯೇಕೆ ಪರಿಹಾರ ಪಾಲಿಟಿಕ್ಸ್!?