Asianet Suvarna News Asianet Suvarna News

ಬೆಂಗಳೂರಿನಲ್ಲಿ 'ಆಪರೇಷನ್‌' ಆಗಿದ್ದ ಯುವಕ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

ಬೆಂಗಳೂರಿನಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಯುವಕ ಬಲಿಯಾಗಿದ್ದಾನೆ ಎಂದು ದಾಸರಹಳ್ಳಿ ಖಾಸಗಿ ಆಸ್ಪತ್ರೆ ವೈದ್ಯರ ಮೇಲೆ ಆರೋಪ ಕೇಳಿ ಬಂದಿದೆ ‌.
 

ಬೆಂಗಳೂರಿನಲ್ಲಿ 25 ವರ್ಷದ ಸತೀಶ್‌ ಕಳೆದ ಭಾನುವಾರ ಕುಡಿದು ನೆಲಕ್ಕೆ ಬಿದ್ದಿದ್ದ, ಅವನ ಕೈಗೆ ಗಾಜು ಚುಚ್ಚಿ ನರ ಕಟ್‌ ಆಗಿ ತೀರ್ವ ರಕ್ತಸ್ರಾವವಾಗಿತ್ತು. ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಸರ್ಜರಿ ಮಾಡಬೇಕು ಎಂದಿದ್ದರು. ವೈದ್ಯರು ಆಪರೇಷನ್‌ ಬಳಿಕ ಕುಟುಂಬಸ್ಥರೊಂದಿಗೆ ಮಾತನಾಡಿದ್ದ ಸತೀಶ್‌, ಆದರೆ ನಿನ್ನೆ ಮಧ್ಯಾಹ್ನ ಏಕಾಏಕಿ ಸತೀಶ್‌ ಸಾವನ್ನಪ್ಪಿದ್ದಾನೆ. ಈ ಕುರಿತು ಕೆ.ಪಿ ಅಗ್ರಹಾರ ಪೊಲೀಸ್‌ ಠಾಣೆಗೆ ಸತೀಶ್‌ ಕುಟುಂಬಸ್ಥರ ದೂರು ನೀಡಿದ್ದಾರೆ.