ಮಂದಾರ್ತಿ ಗುಡ್ಡಕ್ಕೆ ಬಂದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?

ಪ್ರೇಮಿಸುವಾಗ ಇದ್ದ ಧೈರ್ಯ ಊರು ಸುತ್ತುವಾಗ ಇದ್ದ ಸ್ಥೈರ್ಯ, ದಾಂಪತ್ಯ ಜೀವನ ನಡೆಸಲು ಹೊರಟಾಗ ಮಾತ್ರ ಇಲ್ಲದೇ ಹೋಯ್ತು. ಬೆಂಗಳೂರಿನ ಯುವ ಪ್ರೇಮಿಗಳ ಜೋಡಿ, ಉಡುಪಿಯ ಪಾಳು ಗುಡ್ಡೆಯಲ್ಲಿ ಸುಟ್ಟು ಕರಕಲಾಯ್ತು! ಹೀಗೆ ಕರ್ನಾಟಕವನ್ನೇ ಬೆಚ್ಚಿಬೀಳಿಸಿದ್ದ ಉಡುಪಿಯಲ್ಲಿ ನಡೆದ ಜೋಡಿ ಆತ್ಮಹತ್ಯೆ ಕೇಸ್ ನ ಇನ್ಸೈಡ್ ಸ್ಟೋರಿ..
 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 24): ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿ ಮಾಡುತ್ತಿದ್ದ ಯುವ ಜೋಡಿ (Young Couples) ಕೊನೆಗೆ ತಾವು ಕುಳಿತ ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಉಡುಪಿಯ ಮಂದಾರ್ತಿ (Udupi Mandarti) ಗುಡ್ಡದಲ್ಲಿ ಸುಟ್ಟು ಕರಕಲಾಗಿದ್ದರು ಯಶವಂತ್ (Yashwanth) ಹಾಗೂ ಜ್ಯೋತಿ (Jyothi) ಎನ್ನುವ ಯುವ ಪ್ರೇಮಿಗಳು.

ಬೆಂಗಳೂರಿನಲ್ಲಿದ್ದವರು ಬ್ರಹ್ಮಾವರಕ್ಕೆ ಹೋಗಿ ಸುಟ್ಟು ಕರಕಲಾಗ್ತಾರೆ ಅಂದ್ರೆ ಏನ್ ಅರ್ಥ. ಇವರ ಪ್ರೀತಿಗೆ ಹೆತ್ತವರು ವಿರೋಧಿಸುತ್ತಿದ್ದಾರೆ ಅಂತ ಆತ್ಮಹತ್ಯೆ ಮಾಡಿಕೊಂಡ್ರು ಅಂತ ಪ್ರಾಥಮಿಕ ತನಿಖೆಯಲ್ಲಿ ಹೇಳಲಾಗ್ತಿದ್ರೂ ಹೆತ್ತವರು ಮಾತ್ರ ನಮಗೆ ಅವರ ಪ್ರೀತಿ ವಿಷ್ಯ ಗೊತ್ತೇ ಇರಲಿಲ್ಲ ಅಂತಾರೆ. 

ಉಡುಪಿ: ಮದುವೆಯಾದ 2 ದಿನಕ್ಕೆ ಸಾವಿಗೆ ಶರಣಾದ ಜೋಡಿ, ಕೇಸ್‌ಗೆ ಟ್ವಿಸ್ಟ್

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮನೆಯವರು ಪ್ರೀತಿಗೆ ಒಪ್ಪಲ್ಲಿಲ್ಲ ಅನ್ನೋ ಕಾರಣಕ್ಕೆ ಮಂಗಳೂರಿಗೆ ಹೋಗಿ ಬಾಡಿಗೆ ಮನೆ ಮಾಡಿದ್ದ ಯಶವಂತ ಮತ್ತು ಜ್ಯೋತಿ ಮಾರನೇ ದಿನವೇ ಹೆಣವಾಗಿ ಹೋಗ್ತಾರೆ ಅಂದ್ರೆ ಏನ್ ಅರ್ಥ. ಅವತ್ತು ಬ್ರಹ್ಮಾವರದಲ್ಲಿ ನಿಜಕ್ಕೂ ಅವರಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ರಾ ಅಥವಾ ಕೊಲೆ ಏನಾದ್ರೂ ಆಗಿದ್ಯಾ ಅನ್ನೋ ಹತ್ತು ಹಲವು ಪ್ರಶ್ನೆಗಳು ಪೊಲೀಸರಿಗೆ ಕಾಡುತ್ತಿದೆ.

Related Video