Asianet Suvarna News Asianet Suvarna News

ಭೀಮಾತೀರದಲ್ಲಿ ಹೊಸ ಗ್ಯಾಂಗ್: ಕಾರಿನಲ್ಲಿ ಓಡಾಡುವವರು, ಬ್ಯಾಂಕ್‌ ಗ್ರಾಹಕರೇ ಹುಷಾರ್..!

ಬ್ಯಾಂಕ್‌ನಿಂದ ಹಣ ಡ್ರಾ ಮಾಡುವವರಿಗಾಗಿಯೇ ಹೊಂಚು ಹಾಕುವ ಖದೀಮರು 

ವಿಜಯಪುರ(ಆ.18): ನೆತ್ತರ ಹೊಳೆ ಹರಿದಿದ್ದ ಭೀಮಾತೀರಕ್ಕೆ ಈಗ ಹೊಸ ಗ್ಯಾಂಗ್‌ ಎಂಟ್ರಿ ಕೊಟ್ಟಿದೆ. ದ್ವೇಷ, ರಕ್ತದ ದಾಹ ಖತರ್ನಾಕ್‌ಗಳ ಗುರಿ ಅಲ್ಲವೇ ಅಲ್ಲ. ಹೌದು, ಕಾರಿನಲ್ಲಿ ಓಡಾಡೋರು, ಬ್ಯಾಂಕಿಗೆ ಹೋಗುವರರೇ ಇವರ ಟಾರ್ಗೆಟ್‌. ನಟ್ಟ ನಡುರೋಡಲ್ಲಿ ಎಲ್ಲರೆದುರೇ ಹಣ ಎಗರಿಸುತ್ತಾರೆ ಈ ಪುಂಡರು. ಬ್ಯಾಂಕ್‌ನಿಂದ ಹಣ ಡ್ರಾ ಮಾಡುವವರಿಗಾಗಿಯೇ ಈ ಖದೀಮರು ಹೊಂಚು ಹಾಕುತ್ತಾರೆ. ಹಣ ಡ್ರಾ ಮಾಡಿಕೊಂಡು ಕಾರಿನಲ್ಲಿ ಹೋಗುವವರನ್ನೇ ಫಾಲೋ ಮಾಡಿ, ಕಾರಿನ ಆಯಿಲ್‌ ಸೋರುತ್ತಿದೆ ಅಂತ ಹೇಳುತ್ತಾರೆ. ಮಾಲೀಕ ಆಯಿಲ್‌ ಚೆಕ್‌ ಮಾಡೋಕೆ ಕಾರಿನಿಂದ ಕೆಳಗೆ ಇಳಿದರೆ ಸಾಕು ಕಾರಿನಲ್ಲಿದ್ದ ಹಣ ಕಿತ್ತು ಪರಾರಿಯಾಗುತ್ತಾರೆ. 

ಕ್ಲಬ್‌ಹೌಸ್‌ನಲ್ಲಿ ಪಾಕ್‌ ಪ್ರೇಮ: ಪ್ರಕರಣ ದಾಖಲಿಸಿ ಕಿಡಿಗೇಡಿಗಳ ಬೇಟೆಗೆ ಮುಂದಾದ ಪೊಲೀಸರು

Video Top Stories