ಶ್ರೀಗಂಧ ಮರಗಳನ್ನು ಕದಿಯುತ್ತಿದ್ದ ಯುವಕರು ಸಿಕ್ಕಿ ಬಿದ್ದಿದ್ದು ಬಹಳ ರೋಚಕ!
Nov 23, 2020, 1:53 PM IST
ಬೆಂಗಳೂರು (ನ. 23): ಎಂದಿನಂತೆ ಅಕ್ರಮಗಳನ್ನು ಬಯಲಿಗೆಳೆಯುವ ಕವರ್ ಸ್ಟೋರಿ ತಂಡ ಈ ಬಾರಿ ಥ್ರಿಲ್ಲಿಂಗ್ ಸಾಹಸಕ್ಕೆ ಕೈ ಹಾಕಿದೆ.
ಕೆಲಸ ಆಗ್ಬೇಕು ಅಂದ್ರೆ ಕೈ ಬಿಸಿ ಮಾಡ್ಬೇಕು, ಲಕ್ಷಗಳಲ್ಲಿ ಡೀಲ್ ಮಾಡ್ತಾರೆ ಬಿಬಿಎಂಪಿ ಎಂಜಿನೀಯರ್ಗಳು!
ಗಂಧದ ಮರಗಳ್ಳತನ ಸಾಮಾನ್ಯವಾಗಿ ಎಲ್ಲಾ ಕಡೆ ನಡೆಯುತ್ತದೆ. ಇಲ್ಲೊಂದು ಯುವಕರ ತಂಡ ಗಂಧದ ಮರಗಳ್ಳತನಕ್ಕೆ ಮಾಸ್ಟರ್ ಪ್ಲಾನ್ ಮಾಡಿತ್ತು. ಕಾರ್ಯಾಚರಣೆಯನ್ನೂ ಶುರು ಮಾಡಿತ್ತು. ಆದರೆ ಅದನ್ನು ಯಶಸ್ವಿಯಾಗಲು ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ಬಿಡಲಿಲ್ಲ. ಗಂಧಕಳ್ಳರನ್ನು ಸಾಕ್ಷಿ ಸಮೇತ ಹಿಡಿದಿದೆ. ಬಾಯಲ್ಲಿ ಹೇಳಿದಷ್ಟು ಸುಲಭವಾಗಿರಲಿಲ್ಲ ಈ ಕಾರ್ಯಾಚರಣೆ. ಅಪಾಯವನ್ನು ಲೆಕ್ಕಿಸದೇ ಕವರ್ ಸ್ಟೋರಿ ತಂಡ ಕಳ್ಳರನ್ನು ಹಿಡಿದಿದೆ. ಹಾಗಾದರೆ ಇದು ನಡೆದಿದ್ದೆಲ್ಲಿ? ಹೇಗಿತ್ತು ಕಾರ್ಯಾಚರಣೆ? ನೋಡೋಣ ಬನ್ನಿ..!