Asianet Suvarna News Asianet Suvarna News

ಚಿಕ್ಕಮಗಳೂರು; ಮಗು ಕೈಗೆ ಕೊಟ್ಟು ಕಾಲು ಕಿತ್ತ ಎಸ್ಟೇಟ್ ಮಾಲೀಕ!

ಚಿಕ್ಕಮಗಳೂರಿನಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯ ಪ್ರಕರಣ/ ಹೆಣ್ಣು ಮಗಳ ಕಣ್ಣಲ್ಲಿ ನೀರು/ ಮನೆಗೆಲಸ ಮಾಡಿಕೊಳ್ಳುವ ನೆಪದಲ್ಲಿ ಹೀನ ಕೆಲಸ/ ಕೈಗೆ ಮಗು ಕೊಟ್ಟು ಪರಾರಿ

ಚಿಕ್ಕಮಗಳೂರು( ಫೇ. 12) ಆ ಬಡ ಕುಟುಂಬ ಕಾಫಿನಾಡ ಅದೊಂದು ತೋಟದ ಮನೆಯಲ್ಲಿ ಕಳೆದ ಕೆಲ ವರ್ಷಗಳಿಂದ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿತ್ತು.. ಕೆಲಸ ಕೊಟ್ಟ ಮಾಲೀಕನಿಗೆ ಬಡಕುಟುಂಬವೂ ಕೂಡ ಋಣಿಯಾಗಿತ್ತು. ಆದ್ರೆ ಆ ಬಡ ಕುಟುಂಬದ ಹೆಣ್ಣು ಮಗಳ ಮೇಲೆ ಕಣ್ಣಾಕಿದ ತೋಟದ ಮಾಲೀಕ ಮಾಡಿದ್ದು ಮಾತ್ರ ಮಣ್ಣು ತಿನ್ನೋ ಕೆಲಸ.

ಮೂಡಿಗೆರೆಯಲ್ಲಿ  ಅಣ್ಣನಿಂದಲೇ ತಂಗಿ ಮೇಲೆ ಅತ್ಯಾಚಾರ

ಮನೆಗೆಲಸ ಮಾಡಿಸಿಕೊಳ್ಳೋ ನೆಪದಲ್ಲಿ ಯುವತಿಯ ಜತೆ ಸಂಪರ್ಕ ಬೆಳೆಸಿ ಮಗು ಕೊಟ್ಟು ಕಣ್ಮರೆಯಾಗಿದ್ದಾನೆ. ಸದ್ಯ 2 ವಾರದ ಹಸುಗೂಸನ್ನ ಇಟ್ಟುಕೊಂಡು ನೊಂದ ಹುಡುಗಿ ಇದೀಗ ನ್ಯಾಯಕ್ಕಾಗಿ ಅಲೆದಾಡುವಂತಾಗಿದೆ.