
ಚಿಕ್ಕಮಗಳೂರು; ಮಗು ಕೈಗೆ ಕೊಟ್ಟು ಕಾಲು ಕಿತ್ತ ಎಸ್ಟೇಟ್ ಮಾಲೀಕ!
ಚಿಕ್ಕಮಗಳೂರಿನಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯ ಪ್ರಕರಣ/ ಹೆಣ್ಣು ಮಗಳ ಕಣ್ಣಲ್ಲಿ ನೀರು/ ಮನೆಗೆಲಸ ಮಾಡಿಕೊಳ್ಳುವ ನೆಪದಲ್ಲಿ ಹೀನ ಕೆಲಸ/ ಕೈಗೆ ಮಗು ಕೊಟ್ಟು ಪರಾರಿ
ಚಿಕ್ಕಮಗಳೂರು( ಫೇ. 12) ಆ ಬಡ ಕುಟುಂಬ ಕಾಫಿನಾಡ ಅದೊಂದು ತೋಟದ ಮನೆಯಲ್ಲಿ ಕಳೆದ ಕೆಲ ವರ್ಷಗಳಿಂದ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿತ್ತು.. ಕೆಲಸ ಕೊಟ್ಟ ಮಾಲೀಕನಿಗೆ ಬಡಕುಟುಂಬವೂ ಕೂಡ ಋಣಿಯಾಗಿತ್ತು. ಆದ್ರೆ ಆ ಬಡ ಕುಟುಂಬದ ಹೆಣ್ಣು ಮಗಳ ಮೇಲೆ ಕಣ್ಣಾಕಿದ ತೋಟದ ಮಾಲೀಕ ಮಾಡಿದ್ದು ಮಾತ್ರ ಮಣ್ಣು ತಿನ್ನೋ ಕೆಲಸ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮೂಡಿಗೆರೆಯಲ್ಲಿ ಅಣ್ಣನಿಂದಲೇ ತಂಗಿ ಮೇಲೆ ಅತ್ಯಾಚಾರ
ಮನೆಗೆಲಸ ಮಾಡಿಸಿಕೊಳ್ಳೋ ನೆಪದಲ್ಲಿ ಯುವತಿಯ ಜತೆ ಸಂಪರ್ಕ ಬೆಳೆಸಿ ಮಗು ಕೊಟ್ಟು ಕಣ್ಮರೆಯಾಗಿದ್ದಾನೆ. ಸದ್ಯ 2 ವಾರದ ಹಸುಗೂಸನ್ನ ಇಟ್ಟುಕೊಂಡು ನೊಂದ ಹುಡುಗಿ ಇದೀಗ ನ್ಯಾಯಕ್ಕಾಗಿ ಅಲೆದಾಡುವಂತಾಗಿದೆ.