Asianet Suvarna News Asianet Suvarna News

ರಕ್ತ ಸುರಿಯುತ್ತಿದ್ರೂ ಬಿಡದೆ ಮಾರಣಾಂತಿಕ ಹಲ್ಲೆ: ಶಾಸಕ ಹ್ಯಾರಿಸ್‌ ಪುತ್ರ ನಲಪಾಡ್‌ ಹೇಳಿದ್ದಿಷ್ಟು

*  ವ್ಯಕ್ತಿಯೊಬ್ಬನ ಮೇಲೆ ಉದ್ಯಮಿಯಿಂದ ಮಾರಣಾಂತಿಕ ಹಲ್ಲೆ 
*  ಉದ್ಯಮಿ ರಾಹುಲ್‌ ರಾಜೀವ್‌ ಎಂಬಾತನ ಬಂಧನ 
*  ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರಿಂದ ದೂರು ದಾಖಲು
 

ಬೆಂಗಳೂರು(ಅ.22):  ನಗರದ ಶಿಫ್ಟ್‌ ಪಬ್‌ನಲ್ಲಿ ನಡೆದ ವ್ಯಕ್ತಿಯೊಬ್ಬನ ಮೇಲೆ ಉದ್ಯಮಿಯಿಂದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ರಾಹುಲ್‌ ರಾಜೀವ್‌ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ. ರಕ್ತ ಸುರಿಯುತ್ತಿದ್ದರೂ ಬಿಡದೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿತ್ತು. ಈ ಸಂಬಂಧ ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರಿಂದ ದೂರು ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಶಾಸಕ ಹ್ಯಾರಿಸ್‌ ಅವರ ಪುತ್ರ ಮೊಹಮ್ಮದ್‌ ನಲಪಾಡ್‌ ಪ್ರತಿಕ್ರಿಯೆ ನೀಡಿದ್ದು, ಈ ಘಟನೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ಇವರು ಯಾರು ಅಂತ ನನಗೆ ಗೊತ್ತಿಲ್ಲ ಅಂತ ಹೇಳಿದ್ದಾರೆ. 

ಸ್ನೇಹಿತನಿಂದ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ, ರಾಜಿ ಮಾಡಿಸಿದ್ರಾ ನಲಪಾಡ್.?

Video Top Stories