
ಜ್ಯೋತಿಷಿ ಪ್ರಮೋದ್ ದರೋಡೆ: ಆಪ್ತ ಸಹಾಯಕಿ ಮೇಘನಾಳೇ ಮಾಸ್ಟರ್ಮೈಂಡ್!
ಖತರ್ನಾಕ್ ಕಳ್ಳರ ಟೀಂನ ಹೆಡೆಮುರಿ ಕಟ್ಟಿದ್ದೇ ಬಲು ರೋಚಕವಾಗಿದೆ
ಬೆಂಗಳೂರು(ಜು.14): ಜ್ಯೋತಿಷಿ ಕೈಕಾಲು ಕಟ್ಟಿ ಚಿನ್ನ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೇಡಿ ಕಿಂಗ್ಪಿನ್ ಕೈವಾಡ ಇದೀಗ ಬಯಲಾಗಿದೆ. ಖತರ್ನಾಕ್ ಕಳ್ಳರ ಟೀಂನ ಹೆಡೆಮುರಿ ಕಟ್ಟಿದ್ದೇ ಬಲು ರೋಚಕವಾಗಿದೆ. ಮೇಘನಾ ಎಂಬಾಕೆಯೇ ಈ ದರೋಡೆ ಹಿಂದಿನ ಮಾಸ್ಟರ್ ಮೈಂಡ್. ಸದ್ಯ ಮೇಘನಾ ಮತ್ತು ಅವರ ಗ್ಯಾಂಗ್ಅನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಸೇಲಂನಲ್ಲಿ ಬಂಧಿಸಿ ಮೇಘನಾ ಅಂಡ್ ಟೀಂನ ಪೊಲೀಸರು ಕರೆತಂದಿದ್ದಾರೆ. ಮೇಘನಾ ಜ್ಯೋತಿಷಿ ಪ್ರಮೋದ್ ಅವರ ಪಿಎ ಆಗಿದ್ದಾಳೆ ಅಂತ ತಿಳಿದು ಬಂದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬೆಂಗಳೂರು: ಹಾಡಹಗಲೇ ಜ್ಯೋತಿಷಿ ಮನೆ ರಾಬರಿ: ನಗದು, ಚಿನ್ನಾಭರಣ ಎಗರಿಸಿ ಎಸ್ಕೇಪ್