Asianet Suvarna News Asianet Suvarna News

ಬೆಂಗಳೂರಿನಲ್ಲಿದ್ದರೂ ಚೆನ್ನೈಗೆ ಹೋಗ್ತಿದ್ದೇನೆ ಎಂದು ಸುಳ್ಳು ಹೇಳಿದ್ದ ಬಿಂದು

* ಬೆಂಗಳೂರಿನಲ್ಲಿ ಭೀಕರ ಅಪಘಾತ
*  ಜನ ಪ್ರಯಾಣಿಸುವ ಕಾರಿನಲ್ಲಿ 7 ಜನರು ಇದ್ದರು.
* ಅತಿಯಾದ ವೇಗ ಬಂದ ಕಾರಣ, ಹಾಗೂ ಸೀಟ್‌ ಬೆಲ್ಟ್ ಕೂಡಾ ಧರಿಸಿರಲಿಲ್ಲ.
* ಬೆಂಗಳೂರಿನಲ್ಲಿಯೇ ಇದ್ದರೂ ಚೆನ್ನೈಗೆ ಹೋಗುತ್ತಿದ್ದೇನೆ ಎಂದಿದ್ದ ಬಿಂದು

ಬೆಂಗಳೂರು(ಆ.31): ಬೆಂಗಳೂರಿನಲ್ಲಿ ನಡೆದ ಭೀಕರ ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿದ್ದು, ಇದರಲ್ಲಿ ತಮಿಳುನಾಡಿನ ಶಾಸಕರ ಪುತ್ರ ಬಲಿಯಾಗಿದ್ದಾರೆ. ಬಿಂದು ತಂದೆ ಚಂದ್ರಶೇಖರ್ ಮಾತಯನಾಡಿದ್ದಾರೆ.

ಕೋರಮಂಗಲ ಅಪಘಾತ: ಶಾಸಕ ಪ್ರಕಾಶ್ ಭಾವಿ ಸೊಸೆ ಸಾವಿಗೆ ಟ್ವಿಸ್ಟ್!

ಡೆಡ್ಲಿ ಆಕ್ಸಿಡೆಂಟ್ 7 ಮಂದಿಯನ್ನು ಬಲಿ ಪಡೆದಿದೆ. ಅತಿಯಾದ ವೇಗ ಬಂದ ಕಾರಣ, ಹಾಗೂ ಸೀಟ್‌ ಬೆಲ್ಟ್ ಕೂಡಾ ಧರಿಸಿರಲಿಲ್ಲ. 4 ಜನ ಪ್ರಯಾಣಿಸುವ ಕಾರಿನಲ್ಲಿ 7 ಜನರು ಇದ್ದರು. ಸೀಟ್ ಬೆಲ್ಟ್ ಹಾಕದ ಕಾರಣ ಏರ್ ಬ್ಯಾಗ್ ಓಪನ್ ಆಗಿರಲಿಲ್ಲ. ಎರಡು ಟಯರ್‌ಗಳು ಚೂರು ಚೂರಾಗಿದೆ. ಯಾರೂ ಸೀಟ್ ಬೆಲ್ಟ್ ಹಾಕಿರಲಿಲ್ಲ.  ತಂದೆ ತಾಯಿಗೆ ಬಿಂದು ಸುಳ್ಳು ಹೇಳಿದ್ದಳು. ಬೆಂಗಳೂರಿನಲ್ಲಿ ಇದ್ದರೂ ಚೆನ್ನೈಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಳು .

Video Top Stories