Asianet Suvarna News Asianet Suvarna News

ಹೆಚ್‌ ಡಿ ರೇವಣ್ಣ ಜಾಮೀನಿಗೆ ಕಾರಣವಾಗಿದ್ದು ಆ 3 ಅಂಶಗಳು!

ಎರಡು ದಿನಗಳ ಕಾಲ ತೀವ್ರ ವಾದ ಪ್ರತಿವಾದ ಆಲಿಸಿದ ನಂತರ ಕೋರ್ಟ್​ ರೇವಣ್ಣರಿಗೆ ಬೇಲ್​​ ಮಂಜೂರು ಮಾಡಿದೆ. ಕೋರ್ಟ್ ನಲ್ಲಿ ಏನೆಲ್ಲಾ ವಾದ ಪ್ರತಿವಾದ ನಡೆಯಿತು ಇಲ್ಲಿದೆ ಮಾಹಿತಿ.

ಅಂತೂ ಇಂತೂ ರೇವಣ್ಣರಿಗೆ ಬೇಲ್​ ಸಿಕ್ಕಿದೆ. ಎರಡು ದಿನಗಳ ಕಾಲ ತೀವ್ರ ವಾದ ಪ್ರತಿವಾದ ಆಲಿಸಿದ ನಂತರ ಕೋರ್ಟ್​ ರೇವಣ್ಣರಿಗೆ ಬೇಲ್​​ ಮಂಜೂರು ಮಾಡಿದೆ. ಈ ಮೂಲಕ 5 ದಿನಗಳ ಕಾಲ ಜೈಲಿನ ಕೋಟೆಯಲ್ಲಿ ಕಳೆದಿದ್ದ ಹಾಸನಾಧಿಪತಿ ಇವತ್ತು ನಿರಾಳರಾಗಿದ್ದಾರೆ. 

ದೆಹಲಿ ಹೈಕೋರ್ಟ್ ನೀಡಿದ್ದ 2 ಆದೇಶ ಪ್ರತಿ ಸಲ್ಲಿಸಿ, ಪ್ರಜ್ವಲ್​ ಪ್ರಕರಣವನ್ನೂ ಪ್ರಸ್ತಾಪಿಸಿ ಪಬ್ಲಿಕ್​ ಪ್ರಾಸೀಕ್ಯೂಟರ್​​​ ಜಾಮೀನು ಮಂಜೂರು ಮಾಡಬಾರದ್ದು ಅಂತ ವಾದಿಸಿದ್ರು. ಆದ್ರೆ ರೇವಣ್ಣ ಪರ ವಕೀಲ ನಾಗೇಶ ಮೂರು ಅಂಶಗಳನ್ನ ಕೋರ್ಟ್​ ಮುಂದೆ ಇಟ್ಟು ಜಾಮೀನು ಮಂಜೂರು ಮಾಡಲು ಕೋರಿಕೊಂಡರು. ಕೊನೆಗೆ ಆ ಅಂಶವೇ ರೇವಣ್ಣ ರಿಲೀಫ್​​ ಆಗಲು ಕಾರಣವಾಗಿದೆ.