Asianet Suvarna News Asianet Suvarna News

Mangaluru: ಕಾಯಬೇಕಾದ ಅಧಿಕಾರಿಗಳಿಂದಲೇ ಭೂಮಾಫಿಯಾ: ಸರ್ಕಾರಿ ಜಾಗದಲ್ಲಿ ಮನೆ ನಿರ್ಮಾಣ

*  ಭೂಮಾಫಿಯಾಗೆ ಮಾಡೋರ ಕೈಗೆ ಸಿಕ್ಕ ಸರ್ಕಾರಿ ಜಾಗ
*  1.4 ಎಕರೆ ಸರ್ಕಾರಿ ಜಾಗವನ್ನ ಖಾಸಗಿ ವ್ಯಕ್ತಿಗಳ ಕೈಗೆ ಇಟ್ಟಿದೆ ಉಳ್ಳಾಳ ನಗರಸಭೆ
*  ಕಡಲ್ಕೊರೆತ ಸಂತ್ರಸ್ತರಿಗೆ ಅಂತ ಮೀಸಲಿಟ್ಟ ಸರ್ಕಾರಿ ಜಾಗ 
 

ಮಂಗಳೂರು(ಮಾ.22): ಮಂಗಳೂರಿನಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತ ಘಟನೆ ನಡೆದಿದೆ. ಹೌದು, ಕಾಯಬೇಕಾದ ಅಧಿಕಾರಿಗಳಿಂದಲೇ ಭೂಮಾಫಿಯಾ ನಡೆಯುತ್ತಿದೆ. ಕೋಟಿ ಮೌಲ್ಯದ ಸರ್ಕಾರಿ ಜಾಗ ಭೂಮಾಫಿಯಾಗೆ ಮಾಡೋರ ಕೈಗೆ ಸಿಕ್ಕಿದೆ. ಮಂಗಳೂರಿನ ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ನಡೆದಿದೆ. ಸರ್ಕಾರಿ ಜಾಗದಲ್ಲಿ ಎದ್ದು ನಿಂತಿವೆ ಬಿಲ್ಡರ್‌ಗಳ ಲಕ್ಷಾಂತರ ರೂ. ಮೌಲ್ಯದ ಮನೆಗಳು. 1.4 ಎಕರೆ ಸರ್ಕಾರಿ ಜಾಗವನ್ನ ಖಾಸಗಿ ವ್ಯಕ್ತಿಗಳ ಕೈಗೆ ಇಟ್ಟಿದೆ ಉಳ್ಳಾಳ ನಗರಸಭೆ. ಈಗಾಗಲೇ ಸರ್ಕಾರಿ ಜಾಗದಲ್ಲಿ ಬಡಾವಣೆ ನಿರ್ಮಿಸಿ ಐದಾರು ಮನೆಗಳನ್ನ ನಿರ್ಮಾಣ ಮಾಡಲಾಗಿದೆ. ಕಡಲ್ಕೊರೆತ ಸಂತ್ರಸ್ತರಿಗೆ ಅಂತ ಸರ್ಕಾರಿ ಜಾಗವನ್ನ ಮೀಸಲಿಡಲಾಗಿತ್ತು. 

Karnataka Cabinet Expansion: ಸಚಿವಾಕಾಂಕ್ಷಿಗಳಿಗೆ ಶಾಕಿಂಗ್‌ ನ್ಯೂಸ್‌..!