
ಬೆಳಗಾವಿ: ಕೊರೋನಾಗೆ ಅಣ್ಣ ಬಲಿ, ಅಂಗಡಿಗೆ ಕನ್ನ ಹಾಕಿದ ತಮ್ಮ..!
* ಲಾಕ್ಡೌನ್ನಲ್ಲಿ ನಡೆದ ಘಟನೆ ಅನ್ಲಾಕ್ ಬಳಿಕ ಬೆಳಕಿಗೆ ಬಂದ ಪ್ರಕರಣ
* ಅಣ್ಣದ ಚಿನ್ನದ ಅಂಗಡಿಗೆ ಕನ್ನಹಾಕಿದ ತಮ್ಮ
* ಬೆಳಗಾವಿ ನಗರದಲ್ಲಿ ನಡೆದ ಘಟನೆ
ಬೆಳಗಾವಿ(ಸೆ.17): ಚಿನ್ನದ ಅಂಗಡಿ ಮಾಲೀಕನ ಕುಟುಂಬಕ್ಕೆ ತಮ್ಮನೇ ಮೋಸ ಮಾಡಿದ ಘಟನೆ ನಗರದಲ್ಲಿ ನಡೆದಿದೆ. ಚಿನ್ನದಂಗಡಿಯಲ್ಲಿದ್ದ ನಾಲ್ಕು ಕೋಟಿ ರೂ. ಬೆಲೆ ಬಾಳುವ ಚಿನ್ನ, ಹಣ ಎಲ್ಲವನ್ನ ಪಡೆದು ತಮ್ಮ ಪರಾರಿಯಾಗಿದ್ದಾನೆ. ಲಾಕ್ಡೌನ್ನಲ್ಲಿ ನಡೆದಂತ ಘಟನೆ ಅನ್ಲಾಕ್ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಅಣ್ಣ ಕೊರೋನಾಗೆ ಬಲಿಯಾಗಿದ್ದಾನೆ. ಆದರೆ ಅಣ್ಣದ ಚಿನ್ನದ ಅಂಗಡಿಗೆ ತಮ್ಮನೇ ಕನ್ನಹಾಕಿದ ಮೋಸ ಮಾಡಿದ್ದಾನೆ.
Add Asianetnews Kannada as a Preferred Source
