Asianet Suvarna News Asianet Suvarna News

ಮಾಜಿ ಶಾಸಕ ನರಸಿಂಹ ಸ್ವಾಮಿ ವಿರುದ್ಧ ಕೋಟಿ ಕೋಟಿ ವಂಚನೆ, ಜೀವ ಬೆದರಿಕೆ ಆರೋಪ: FIR ದಾಖಲು

ಮಾಜಿ ಕೇಂದ್ರ ಸಚಿವ ಆರ್ ಎಲ್ ಜಾಲಪ್ಪ ಪುತ್ರ ಮಾಜಿ ಶಾಸಕ ನರಸಿಂಹ ಸ್ವಾಮಿ ವಿರುದ್ಧ ಕೋಟಿ ಕೋಟಿ ವಂಚನೆ ಹಾಗೂ ಜೀವ ಬೆದರಿಕೆ ಆರೋಪ ಕೇಳಿ ಬಂದಿದೆ. ದೊಡ್ಡ ಬಳ್ಳಾಪುರದಿಂದ ನರಸಿಂಹ ಸ್ವಾಮಿ 3 ಬಾರಿ ಶಾಸಕರಾಗಿದ್ದಾರೆ. 

ಬೆಂಗಳೂರು (ಆ. 08): ಮಾಜಿ ಕೇಂದ್ರ ಸಚಿವ ಆರ್ ಎಲ್ ಜಾಲಪ್ಪ ಪುತ್ರ ಮಾಜಿ ಶಾಸಕ ನರಸಿಂಹ ಸ್ವಾಮಿ ವಿರುದ್ಧ ಕೋಟಿ ಕೋಟಿ ವಂಚನೆ ಹಾಗೂ ಜೀವ ಬೆದರಿಕೆ ಆರೋಪ ಕೇಳಿ ಬಂದಿದೆ. ದೊಡ್ಡ ಬಳ್ಳಾಪುರದಿಂದ ನರಸಿಂಹ ಸ್ವಾಮಿ 3 ಬಾರಿ ಶಾಸಕರಾಗಿದ್ದಾರೆ. 

2018 ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಸ್ನೇಹಿತ ಸಂಗಮ್ ದೇವ್ ಬಳಿ 3 ಕೋಟಿ ರೂ ಹಣ ಪಡೆದಿದ್ದರು. ಇದೀಗ ಹಣವನ್ನು ಕೊಡದೇ ವಂಚಿಸಿದ್ದಾರೆ. ವಾಪಸ್ ಕೊಡುವಂತೆ ಕೇಳಿದರೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಂಗಮ್ ದೇವ್ ದೂರು ನೀಡಿದ್ದಾರೆ.  ಇದೀಗ ನರಸಿಂಹ ಸ್ವಾಮಿ ಹಾಗೂ ಅವರ ಪತ್ನಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 

Video Top Stories