Asianet Suvarna News Asianet Suvarna News

ಬೆಳಗಾವಿಯಲ್ಲೊಂದು ಅಮಾನವೀಯ ಘಟನೆ..ಕೈಕೊಟ್ಟ ಬೆಳೆ, ಜೀವನಕ್ಕೆ ಸಾಲದ ಮೊರೆ ಹೋದ ರೈತ ಆತ್ಮಹತ್ಯೆ

ಭೀಕರ ಬರಕ್ಕೆ ಕೈಕೊಟ್ಟ ಬೆಳೆ,ಜೀವನಕ್ಕೆ ಸಾಲದ ಮೊರೆ ಹೋದ ರೈತ
ಸಾಲ ಮರುಪಾವತಿ ವಿಳಂಬ ರೈತನ ಪತ್ನಿ, ಪುತ್ರನಿಗೆ ಗೃಹಬಂಧನ
ಬಡ್ಡಿ ಮೇಲೆ ಸಾಲ ನೀಡಿದ್ದ ಮಹಿಳೆಯಿಂದಲೇ ಇಬ್ಬರಿಗೆ ಗೃಹಬಂಧನ

ಭೀಕರ ಬರಕ್ಕೆ(Drought) ಬೆಳೆ ಕೈಕೊಟ್ಟಿದ್ದರಿಂದ ಜೀವನಕ್ಕೆ ರೈತನೋರ್ವ ಸಾಲದ(Debt) ಮೊರೆ ಹೋಗಿದ್ದ, ಇದರ ಮರುಪಾವತಿ ವಿಳಂಬ ಮಾಡಿದಕ್ಕೆ ರೈತನ ಪತ್ನಿ, ಮಗನನ್ನು ಗೃಹಬಂಧನದಲ್ಲಿ(House Arrest) ಇಡಲಾಗಿದೆ. ಬಡ್ಡಿ ಮೇಲೆ ಸಾಲ ನೀಡಿದ್ದ ಮಹಿಳೆಯಿಂದಲೇ ಗೃಹಬಂಧನದಲ್ಲಿ ಇರಿಸಲಾಗಿದೆ. ಇಸ್ಲಾಂಪುರ ಗ್ರಾಮದ ಸಿದ್ದವ್ವ ಬಯ್ಯನವರ ಎಂಬಾಕೆಯಿಂದ ಗೃಹಬಂಧನ ಇಡಲಾಗಿದೆ. ಪತ್ನಿ-ಪುತ್ರನನ್ನು ಗೃಹಬಂಧನದಲ್ಲಿಟ್ಟಿದಕ್ಕೆ ವಿಷ ಸೇವಿಸಿ ರೈತ ಆತ್ಮಹತ್ಯೆ(suicide) ಮಾಡಿಕೊಂಡಿದ್ದಾನೆ. ಈ ಘಟನೆ ಬೆಳಗಾವಿ(Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ನಡೆದಿದೆ. ಸತೀಶ್ ಜಾರಕಿಹೊಳಿ ಪ್ರತಿನಿಧಿಸುವ ಕ್ಷೇತ್ರದಲ್ಲಿ ಇಂತಹ ಅಮಾನವೀಯ ಕೃತ್ಯ ನಡೆದಿದೆ. ಜೀವನ ‌ನಿರ್ವಹಣೆಗೆ ಸಿದ್ದವ್ವ ಬಳಿ ಒಂದೂವರೆ ಲಕ್ಷ ಸಾಲ ಪಡೆಯಲಾಗಿತ್ತು. ಐದು ತಿಂಗಳ ಹಿಂದೆ  ಸಾಲ ಪಡೆದಿದ್ದ ರಾಜು ಖೋತಗಿ, ಪಡೆದಿದ್ದ ಸಾಲಕ್ಕೆ ಪ್ರತಿ ತಿಂಗಳು ಶೇ. 10ರಷ್ಟು ಬಡ್ಡಿ ಕಟ್ಟುತ್ತಿದ್ದ.  ಎರಡು ದಿನಗಳ ಸಾಲ ಮರಳಿಸುವಂತೆ ಸಿದ್ದವ್ವ ತಾಕೀತು ಮಾಡಿದ್ದು, ಸಾಲ ಮರಳಿಸಲು ಒಂದೆರಡು ದಿನ ಕಾಲಾವಕಾಶವನ್ನು ರಾಜು ಕೇಳಿದ್ದ. ಮನೆಯಲ್ಲಿ ಬಿಟ್ಟು ಹೋಗುವಂತೆ ಸಿದ್ದವ್ವ  ಮೃತ ರಾಜುಗೆ ಸೂಚನೆ. ಪುತ್ರನನ್ನು ಬಿಡದಿದ್ದಾಗ ಸಿದ್ದವ್ವಳ ಮನೆಗೆ ಹೋಗಿದ್ದ ರಾಜು-ದುರ್ಗವ್ವ. ಪುತ್ರನನ್ನು ಕಳುಹಿಸಿ ರಾಜು , ದುರ್ಗವ್ವರನ್ನು ಮನೆಯಲ್ಲಿ ಕೂರಿಸಿ ಶಿಕ್ಷೆ ನೀಡಲಾಗಿತ್ತು.  ಮರುದಿನ‌ ಮತ್ತೆ ರಾಜುನನ್ನು ಬಿಟ್ಟು ಬಸವರಾಜ್‌, ದುರ್ಗವ್ವಗೆ  ಗೃಹಬಂಧನದಲ್ಲಿ ಇಡಲಾಗಿತ್ತು. ಇದರಿಂದ ಮನನೊಂದು ಮನೆಗೆ ಬಂದ ರಾಜು ಖೋತಗಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಿದ್ದವ್ವಳ ವಿರುದ್ಧ  ದೂರು ದಾಖಲಿಸಿಕೊಳ್ಳದೇ ಪೊಲೀಸರು ಸತಾಯಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ವೀಕ್ಷಿಸಿ:  ಭಾರತದ ಪೌರತ್ವ ಪಡೆದ ಬಳಿಕ ಮೊದಲ ಬಾರಿಗೆ ಮತದಾನ ಮಾಡಿದ ನಟ ಅಕ್ಷಯ್ ಕುಮಾರ್!