ಸಂಪತ್ ರಾಜ್ ಹೊರಗೆ ಬಂದ್ಮೇಲೆ ನಮಗೆ ಏನೋ ಮಾಡೇ ಮಾಡ್ತಾರೆ: ಅಖಂಡ ಆತಂಕ
ಸಂಪತ್ ರಾಜ್ರಿಂದ ನಮಗೆ ಜೀವ ಬೆದರಿಕೆ ಇದೆ. ಹೊರಗೆ ಬಂದ ಮೇಲೆ ನಮಗೆ ಏನೋ ಮಾಡ್ತಾರೆ ಅಂತ ಸಂಪತ್ ರಾಜ್ ಜಾಮೀನು ಬಳಿಕ ಅಖಂಡ ಶ್ರೀನಿವಾಸ ಮೂರ್ತಿ ಹೇಳಿದ್ದಾರೆ.
ಬೆಂಗಳೂರು (ಫೆ. 12): ಸಂಪತ್ ರಾಜ್ರಿಂದ ನಮಗೆ ಜೀವ ಬೆದರಿಕೆ ಇದೆ. ಹೊರಗೆ ಬಂದ ಮೇಲೆ ನಮಗೆ ಏನೋ ಮಾಡ್ತಾರೆ ಅಂತ ಸಂಪತ್ ರಾಜ್ ಜಾಮೀನು ಬಳಿಕ ಅಖಂಡ ಶ್ರೀನಿವಾಸ ಮೂರ್ತಿ ಹೇಳಿದ್ದಾರೆ.
ಸಿದ್ದರಾಮಯ್ಯ, ಜಮೀರ್ ಅಹ್ಮದ್, ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್ ನಮ್ಮ ಪರ ನಿಂತಿದ್ದಾರೆ. ಸಂಪತ್ ರಾಜ್ರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಎಂದು ಸಿಎಲ್ಪಿ ಸಭೆಯಲ್ಲಿ ಮನವಿ ಮಾಡಿದ್ದೇವೆ. ಆದರೆ ಅವರು ಮನಸ್ಸು ಮಾಡುತ್ತಿಲ್ಲ. ಸಂಪತ್ ರಾಜ್ರನ್ನು ಉಚ್ಛಾಟನೆ ಮಾಡುವಂತೆ ಎಐಸಿಸಿಗೂ ಪತ್ರ ಬರೆಯುತ್ತೇನೆ' ಎಂದು ಶ್ರೀನಿವಾಸಮೂರ್ತಿ ಹೇಳಿದ್ದಾರೆ.